Advertisement

ಸರ್ಕಾರಿ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮ

05:08 PM Jul 18, 2021 | Team Udayavani |

ದೊಡ್ಡಬಳ್ಳಾಪುರ: ಜು.19 ಹಾಗೂ 22ರಂದುನಡೆಯುವ2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆಕೈಗೊಂಡಿದ್ದು, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದಮಾರ್ಗಸೂಚಿಯಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನುಅನುಸರಿಸಲಾಗುತ್ತಿದೆ

Advertisement

ಎಂದು ಕ್ಷೇತ್ರ ಶಿಕ್ಷಣಾಧಿಕಾರಿಆರ್‌.ವಿ.ಶುಭ ಮಂಗಳ ತಿಳಿಸಿದರು.ಮಾಹಿತಿ ನೀಡಿರುವ ಅವರು, ಎಸ್‌ಎಸ್‌ಎಲ್‌ಸಿಪರೀಕ್ಷೆಗೆ ನಗರ ಪ್ರದೇಶದಲ್ಲಿ 16 ಮತ್ತು ಗ್ರಾಮೀಣಪ್ರದೇಶಗಳಲ್ಲಿ 12, ಒಟ್ಟು 28 ಪರೀûಾ ಕೇಂದ್ರರಚಿಸಲಾಗಿದೆ. ಕನಿಷ್ಟ 100 ಮಕ್ಕಳಿಗೆ ಒಂದರಂತೆಕಳೆದ ಸಾಲಿಗಿಂತ ಎರಡರಷ್ಟು ಪರೀಕ್ಷಾ ಕೇಂದ್ರರಚಿಸಲಾಗಿದೆ. 27 ಪರೀûಾ ಕೇಂದ್ರಗಳಲ್ಲಿದೊಡ್ಡಬಳ್ಳಾಪುರ ತಾಲೂಕಿನ ಶಾಲಾ ವಿದ್ಯಾರ್ಥಿಗಳುಮತ್ತು 1 ಪರೀûಾ ಕೇಂದ್ರದಲ್ಲಿ ದೊಡ್ಡಬಳ್ಳಾಪುರಮತ್ತು ನೆಲಮಂಗಲ ತಾಲೂಕುಗಳ ಖಾಸಗಿಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಇವುಗಳೊಂದಿಗೆ ತಾಲೂಕಿನ ಕೇಂದ್ರ ಸ್ಥಾನದಲ್ಲಿ 2ಹೆಚ್ಚುವರಿ ಕಾಯ್ದಿರಿಸಿದ ಪರೀûಾ ಕೇಂದ್ರಗಳಿವೆಎಂದು ಹೇಳಿದರು.ಹತ್ತಿರದ ಪರೀûಾ ಕೇಂದ್ರ ಆಯ್ಕೆ ಮಾಡಿಕೊಳ್ಳಿ:ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ-17,ಅನುದಾನಿತ-12 ಮತ್ತು ಅನುದಾನ ರಹಿತ-28ಶಾಲೆಗಳು, ಒಟ್ಟಾರೆ 57 ಶಾಲೆಗಳಿಂದ 1993 ಗಂಡುಮಕ್ಕಳು ಮತ್ತು 1799 ಹೆಣ್ಣು ಮಕ್ಕಳು ಒಟ್ಟು 3792ಶಾಲಾವಿದ್ಯಾರ್ಥಿಗಳು ಪರೀಕ್ಷೆಗೆಹಾಜರಾಗುತ್ತಿದ್ದಾರೆ.ದೊಡ್ಡಬಳ್ಳಾಪುರ ಮತ್ತು ನೆಲಮಂಗಲತಾಲೂಕುಗಳಿಂದ ಒಟ್ಟು140ಖಾಸಗಿಅಭ್ಯರ್ಥಿಗಳುಪರೀಕ್ಷೆಯನ್ನು ಬರೆಯಲಿದ್ದಾರೆ.

ಬೇರೆ ತಾಲೂಕುಅಥವಾ ಜಿಲ್ಲೆಗಳ ಶಾಲೆಗಳಲ್ಲಿ ವ್ಯಾಸಂಗಮಾಡುತ್ತಿದ್ದು, ಪ್ರಸ್ತುತ ನಮ್ಮ ತಾಲೂಕಿನಲ್ಲಿ ವಾಸಿಸುತ್ತಿರುವ 13 ವಿದ್ಯಾರ್ಥಿಗಳಿಗೆ ಇಲಾಖಾ ಆದೇಶದಂತೆ ಕೋವಿಡ್‌-19 ಹಿನ್ನೆಲೆಯಲ್ಲಿ ತಮ್ಮವಾಸಸ್ಥಳಕ್ಕೆ ಹತ್ತಿರದ ಪರೀûಾ ಕೇಂದ್ರವನ್ನು ಆಯ್ಕೆಮಾಡಿಕೊಂಡು ಪರೀಕ್ಷೆ ಬರೆಯಲು ಅವಕಾಶಮಾಡಿಕೊಡಲಾಗಿದೆ. ಜು.19ರಂದು ಗಣಿತ, ವಿಜ್ಞಾನಮತ್ತು ಸಮಾಜ ವಿಜ್ಞಾನ ಹಾಗೂ 22ರಂದು 3ಭಾಷೆಗಳ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳುಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರವನ್ನು ಓ.ಎಂ.ಆರ್‌.ಹಾಳೆಗಳಲ್ಲಿ ಉತ್ತರಿಸಬೇಕಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next