Advertisement

ರಾಮುಲು ಮುನಿಸು: ಸುಧಾಕರ್‌ಗೆ ಬ್ರೇಕ್‌ ಹಾಕಿದ ಸಿಎಂ

10:05 AM Apr 04, 2020 | Sriram |

ಬೆಂಗಳೂರು: ಕೋವಿಡ್ 19 ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಕಡ್ಡಾಯ. ಆದರೆ ಕೋವಿಡ್ 19 ನಿಯಂತ್ರಣದ ವಿಷಯದಲ್ಲಿ ಇಬ್ಬರು ಸಚಿವರು ವೈಮನಸ್ಸಿನಿಂದ ಅಂತರ ಕಾಯ್ದು ಕೊಳ್ಳುತ್ತಿರುವುದು ಮುಖ್ಯಮಂತ್ರಿಗೆ ತಲೆ ನೋವಾಗಿ ಪರಿಣಮಿಸಿದೆ!

Advertisement

ಆರೋಗ್ಯ ಸಚಿವ ಬಿ.ಶ್ರೀ ರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ನಡುವಿನ ಶೀತಲ ಸಮರದ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಬ್ಬರು ಸಚಿವರ ಮುಸುಕಿನ ಗುದ್ದಾಟಕ್ಕೆ ನಿಯಂತ್ರಣ ಹಾಕುವಂತೆ ಸೂಚನೆ ನೀಡಿದರು. ಇದರ ಪರಿಣಾಮ ಇಬ್ಬರೂ ಸಚಿವರನ್ನು ದೂರ ಇಟ್ಟು ಕೋವಿಡ್ 19 ಕುರಿತ ಆರೋಗ್ಯ ಮಾಹಿತಿ ಒದಗಿಸಲು ಶಿಕ್ಷಣ ಸಚಿವ ಸುರೇಶ್‌  ಕುಮಾರ್‌ಗೆ ಜವಾಬ್ದಾರಿ ವಹಿಸಿದ್ದಾರೆ.

ಶ್ರೀ ರಾಮುಲು ಮತ್ತು ಡಾ| ಸುಧಾಕರ್‌ ಅವರಿಗೆ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳ ಕಡೆಗೆ ಗಮನ ಹರಿಸಲು ಸೂಚಿಸಿದ್ದು, ಆ ಮೂಲಕ ಇಬ್ಬರೂ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next