Advertisement

ಪೂಜಾ ಪರಿಕರ ವಿತರಣೆ

07:13 PM Jun 15, 2020 | Naveen |

ಶೃಂಗೇರಿ: ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನದ ನಿತ್ಯ ವಿಧಿಗಳನ್ನು ನಡೆಸುವುದು ಕಷ್ಟಕರವಾದ ಸಂದರ್ಭದಲ್ಲಿ ಶಂಕರ ಸುದ್ದಿವಾಹಿನಿ ಅರ್ಚಕರಿಗೆ ಪೂಜಾ ಪರಿಕರ ನೀಡಿ,ದೈನಂದಿನ ಪೂಜಾ ಕಾರ್ಯ ನಿಯಮಿತವಾಗಿ ನಡೆಯಲು ಸಹಕಾರ ನೀಡಿದೆ ಎಂದು ಶ್ರೀಮಠದ ಜಗದ್ಗುರುಗಳ ಆಪ್ತ ಸಹಾಯಕ ಶಂ.ನ.ಕೃಷ್ಣಮೂರ್ತಿ ಹೇಳಿದರು.

Advertisement

ಶ್ರೀಮಠದ ಪ್ರವಚನ ಮಂದಿರದಲ್ಲಿ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ 22 ದೇವಸ್ಥಾನಗಳ ಅರ್ಚಕರಿಗೆ ಪೂಜಾ ಪರಿಕರದ ಕಿಟ್‌ ವಿತರಿಸಿ ಮಾತನಾಡಿದರು. ಕೋವಿಡ್ ವ್ಯಾಪಕವಾಗಿ ಹರಡಿದ್ದರಿಂದ ಎಲ್ಲಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಅದರಂತೆ ಅನೇಕ ದೇವಸ್ಥಾನಗಳಲ್ಲಿ ತ್ರಿಕಾಲ ಪೂಜೆ ನಡೆಯುತ್ತಿದ್ದರೆ, ಇನ್ನೂ ಕೆಲವು ದೇವಸ್ಥಾನಗಳಲ್ಲಿ ನಿತ್ಯಪೂಜೆ ನಡೆಯುತ್ತಿತ್ತು. ಭಕ್ತಾದಿಗಳಿಗೆ ದೇಗುಲಕ್ಕೆ ಅವಕಾಶವಿಲ್ಲದೇ ಇದ್ದುದರಿಂದ ದೇಗುಲಕ್ಕೆ ಬರುತ್ತಿದ್ದ ಆದಾಯ ಕಡಿತಗೊಂಡಿತ್ತು. ಇದರಿಂದ ಅನೇಕ ದೇವಸ್ಥಾನಗಳಲ್ಲಿ ಪೂಜಾ ವಿಧಿವಿಧಾನ ನಡೆಸುವುದು ಕಷ್ಟವಾಗಿತ್ತು. ಈ ಹಂತದಲ್ಲಿ ಅವರಿಗೆ ನೆರವು ನೀಡುತ್ತಿರುವುದು ಸಮಯೋಚಿತವಾಗಿದೆ ಎಂದರು.

ಶಂಕರ ಸುದ್ದಿವಾಹಿನಿಯ ಬಾಲಾಜಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ. ಸತೀಶ್‌, ಕಾರ್ಯದರ್ಶಿ ಬಿ.ಎಲ್‌.ರವಿಕುಮಾರ್‌, ಶೃಂಗೇರಿ ಸುಬ್ಬಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next