Advertisement

ಅಡಕೆ ಬೆಳೆಗಾರರಿಗೆ ಸೂಚನೆ

06:23 PM May 21, 2020 | Naveen |

ಶೃಂಗೇರಿ: ಅಡಕೆ ಬೆಳೆಗಾರರು ಮುಂಗಾರು ಪೂರ್ವದಲ್ಲಿ ಕೊಳೆ ರೋಗ ನಿರ್ವಹಣೆಗಾಗಿ ರೈತರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಸೂಚನೆ ನೀಡಿದೆ.

Advertisement

ಮುಂಗಾರು ಆರಂಭಕ್ಕೂ ಮೊದಲು ಅಡಕೆ ತೋಟದ ಬಸಿಗಾಲುವೆಯನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ತೋಟದಲ್ಲಿ ಬಿದ್ದಿರುವ ಸೋಗೆಯಲ್ಲಿರುವ ಹಾಳೆಯನ್ನು ಬೇರ್ಪಡಿಸಿ, ಸೋಗೆಯನ್ನು ಅಡಕೆ ಮರದ ಬುಡಕ್ಕೆ ಸೇರಿಸಬೇಕು. ಹಾಳೆಯನ್ನು ತೋಟದಿಂದ ಹೊರಗಡೆ ಹಾಕಬೇಕು. ಕೊಳೆ ಮತ್ತು ಸುಳಿ ರೋಗ ತಡೆಗಟ್ಟಲು ಶೇ.1ರ ಬೋರ್ಡೋ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‌ ಅಥವಾ 2 ಗ್ರಾಂ. ಮೆಟಲ್‌ ಆಕ್ಸಿಲ್‌ ಜೊತೆಗೆ ಮ್ಯೋಂಕೊಜೆಬ್‌ ಡಬ್ಲೂಪಿ 2 ಗ್ರಾಂ. 1 ಲೀಟರ್‌ ನೀರಿನಲ್ಲಿ ಕರಗಿಸಿ ಮಳೆಗಾಲ ಆರಂಭವಾಗುವುದಕ್ಕೂ ಮೊದಲು ಮತ್ತು 30-45 ದಿನದ ನಂತರ ಮತ್ತೊಮ್ಮೆ ಸಿಂಪಡಿಸಬೇಕು. ರೋಗ ಪೀಡಿತ ಎಲೆಯನ್ನು ಕತ್ತರಿಸಿ ಶೇ.1ರ ಬೋರ್ಡೋ ದ್ರಾವಣ ಅಥವಾ 3 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್‌ ಅಥವಾ 2 ಗ್ರಾಂ ಮೆಟಲ್‌ ಆಕ್ಸಿಲ್‌ ಜೊತೆಗೆ ಮ್ಯೋಂಕೊಜೆಬ್‌ ಡಬ್ಲೂಪಿ 2 ಗ್ರಾಂ. 1 ಲೀಟರ್‌ ನೀರಿನಲ್ಲಿ ಕರಗಿಸಿ ಸುಳಿ ಭಾಗಕ್ಕೆ ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next