Advertisement

Vijayapura: ಸಮುದ್ರದ ಮರಳು, ಲಿಂಬೆ ಹಣ್ಣಿನಲ್ಲಿ ಅರಳಿದ ದೇವಿ

07:38 PM Oct 15, 2023 | Pranav MS |

ವಿಜಯಪುರ: ನಗರದಲ್ಲಿರುವ ದಸರಾ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಒಡಿಶಾದ ಮರಳು ಕಲಾವಿದ ಸುದರ್ಶನ ಪಟ್ನಾಯಕ್ ಅವರು ಸಮುದ್ರದ ಮರಳು ಹಾಗೂ ಲಿಂಬೆ ಹಣ್ಣಿನಿಂದ ಶ್ರೀದೇವಿ ಮೂರ್ತಿಯನ್ನು ರೂಪಿಸಿದ್ದಾರೆ. ಮೂರ್ತಿಯ ಎದುರು ಭಾರತ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಪಟ್ಟಕ್ಕೇರುವಂತೆ ಭಕ್ತನೋರ್ವ ಪ್ರಾರ್ಥಿಸುವ ವಿನ್ಯಾಸವನ್ನೂ ರೂಪಿಸಲಾಗಿದೆ.

ಶಹಾಪೇಟೆಯ ಶ್ರೀಅಂಬಾಭವಾನಿ ದೇವಸ್ಥಾನದಲ್ಲಿ ಈ ಅಪರೂಪದ ಮೂರ್ತಿ ನಿರ್ಮಿಸಲಾಗಿದೆ. ಪ್ರತಿ ವರ್ಷದಂತೆ ವಿಶಿಷ್ಟವಾದ ಕಲಾಕೃತಿಯಿಂದ ದೇವಿಯ ಶಿಲ್ಪಕಲೆ ನಿರ್ಮಿಸಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ ಸುದರ್ಶನ್ ಪಟ್ನಾಯಕ್ ನೇತತ್ವದ ಕಲಾವಿದರ ತಂಡ 5 ಸಾವಿರ ನಿಂಬೆಹಣ್ಣು ಹಾಗೂ ಸಮುದ್ರದ 115 ಟನ್ ಮರಳಿನಿಂದ ಶ್ರೀದೇವಿಯ ಕಲಾಕೃತಿ ಅರಳಿಸಿದೆ.
ಇದೇ ವೇಳೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್ ಕಿರೀಟ ಧರಿಸಲೆಂದು ಪ್ರಾರ್ಥನೆ ಆಶೀರ್ವಾದ ಮತ್ತು ಸ್ಫೂರ್ತಿ ನೀಡುವ ದೇವಿಯ ಆಶಿರ್ವಾದದ ಚಿತ್ರದ ನಿರ್ಮಿಸಿದ್ದಾರೆ.
ಕಳೇದ 30 ವರ್ಷಗಳಿಂದ ಶಹಾಪೇಟೆಯ ಶ್ರೀಬಸವೇಶ್ವರ ಆದಿಶಕ್ತಿ ತರುಣ ಮಂಡಳಿ ಸದಸ್ಯರ ಪ್ರಯತ್ನದಿಂದ ಹಾಗೂ ಓಣಿಯ ನಿವಾಸಿಗಳ ಸಹಕಾರದಿಂದ ಈ ಕಾರ್ಯ ಸಾಧನೆಯಾಗಿದೆ ಎಂದು ಸಮಿತಿ ವಿವರಿಸಿದೆ.
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ರಿಷಿಕೇಶ್ ಭಗವಾನ್, ಮಹಾನಗರ ಪಾಲಿಕೆ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಸಂಚಾಲಕ ರಾಜೇಶ್ ಮೋಹನ್ ದೇವಗಿರಿ ತಿಳಿಸಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next