Advertisement
ಸೋಮಶೈಲ ಕ್ಷೇತ್ರವೆಂಬ ಖ್ಯಾತಿ ಪಡೆದಿರುವ ಮುಡುಕುತೊರೆಯಲ್ಲಿ ಜಾತ್ರೋತ್ಸವದ ಸಂಭ್ರಮ ಕಳೆಗಟ್ಟಿತ್ತು. ಬಣ್ಣಬಣ್ಣದ ವಸ್ತ್ರ ಹಾಗೂ ಹೂವುಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ವೀರಾಜಮಾನರಾಗಿದ್ದ ಶ್ರೀ ಭ್ರಮರಾಂಬಿಕೆ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದು ಪುನೀತವಾದ ಭಕ್ತ ಸಾಗರ, ಹಣ್ಣು ಜವನ ಎಸೆದು ಧೂಪ ಹಾಕಿ ಕೈಮುಗಿದು ಪ್ರಾರ್ಥಿಸಿದರು.
Related Articles
Advertisement
ದಾಸೋಹ: ಮುಡುಕುತೊರೆ ಜಾತ್ರೋತ್ಸವ ದಾಸೋಹಕ್ಕೆ ಹೆಸರು ವಾಸಿ. ಅದರಂತೆ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಬೆಳಗೆಯಿಂದ ಮಧ್ಯಾಹ್ನದವರೆಗೂ ಎಲ್ಲೆಡೆ ಭರ್ಜರಿಯಾಗಿ ದಾಸೋಹ ಹಾಗೂ ಮಜ್ಜಿಗೆ ಪಾನಕ ವಿತರಣೆ ಜೋರಾಗಿ ನಡೆಯಿತು. ದಾಸೋಹ ಭವನ(ಪರ ನಡೆಯುವ ಮನೆ)ಗಳು ಸೇರಿದಂತೆ ಬಯಲು ಪ್ರದೇಶಗಳಲ್ಲೇಲ್ಲಾ ಪೆಂಡಾಲ್ ಹಾಕಿ ಬರುವ ಭಕ್ತರು ಹಾಗೂ ಬಂಧು ಬಳಗಕ್ಕೆ ದಾಸೋಹ ನೀಡುತ್ತಿದ್ದುದು ಕಂಡು ಬಂದಿತ್ತು. ಹರಕೆ ಹೊತ್ತಿದ್ದ ಭಕ್ತರು ಮಜ್ಜಿಗೆ ಪಾನಕ ವಿತರಿಸಿ, ಜಾತ್ರೆಯಲ್ಲಿ ಬಿಸಿಲಿನಿಂದ ದಣಿದಿದ್ದವರ ದಾಹ ನೀಗಿಸುವ ಕಾಯಕ ಮಾಡಿದರು.
ಆನಂದ ಧಿಕ್ಷೀತ್ ಸೇರಿದಂತೆ ಅರ್ಚಕ ಮಹೇಶ್ ಪ್ರಸಾದ್, ಜಗದೀಶ್ಮೂರ್ತಿ, ನಾಗೇಶ್ಮೂರ್ತಿ, ರಮೇಶ್, ವಿಶ್ವನಾಥ್ ಸೇರಿದಂತೆ ಹಲವರ ತಂಡ ಧಾರ್ಮಿಕ ವಿಧಿ ವಿಧಾನ ನೇರವೇರಿಸಿದರು. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ದೇವಾಲಯಕ್ಕೆ ಭೆಟಿ ನೀಡಿ ಪೂಜೆ ಸಲ್ಲಿಸಿದರು. ಮಳವಳ್ಳಿ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ರಥೋತ್ಸವ ಆರಂಭಕ್ಕೂ ಮೊದಲು ವಿಶೇಷ ಪೂಜೆ ಸಲ್ಲಿಸಿದರು. ಜಿಪಂ ಸದಸ್ಯ ಮಂಜುನಾಥನ್, ಮಹಾಮಂಗಳಾರತಿ ಸ್ವೀಕರಿಸಿದರು. ನಂಜನಗೂಡು ಡಿವೈಎಸ್ಪಿ ಪ್ರಭಾಕರ್ ರಾವ್ ಶಿಂಧೆ, ತಾಪಂ ಸದಸ್ಯ ರತ್ನರಾಜ್ ಸೇರಿದಂತೆ ಸ್ಥಳೀಯ ಚುನಾುತ ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗÊಹಿಸಿದ್ದರು.