Advertisement

ಅಧ್ಯಕ್ಷರ ಆದೇಶ ಮಾತ್ರ ಸ್ವೀಕರಿಸುವೆ : ಲಂಕಾ ಐಜಿಪಿ ಸ್ಪಷ್ಟೋಕ್ತಿ

05:08 PM Nov 07, 2018 | Team Udayavani |

ಕೊಲಂಬೋ : ಶ್ರೀಲಂಕಾದಲ್ಲಿ ರಾಜಕೀಯ ಮತ್ತು ಸಾಂವಿಧಾನಿಕ ಬಿಕ್ಕಟ್ಟು ಮುಂದುವರಿದಿದ್ದು ಅಲ್ಲಿನ ಪೊಲೀಸ್‌ ಮುಖ್ಯಸ್ಥ ಪೂಜಿತ್‌ ಜಯಸುಂದರ ಅವರು ಇಂದು ಬುಧವಾರ, “ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರ ಆದೇಶಗಳನ್ನು ಮಾತ್ರವೇ ನಾನು ಸ್ವೀಕರಿಸುತ್ತೇನೆ; ಉಚ್ಚಾಟಿ ಪ್ರಧಾನಿ ರಣಿಲ್‌ ವಿಕ್ರಮಸಿಂಘ ಅವರ ಸಂಪುಟದಲ್ಲಿದ್ದ  ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಸಚಿವರ ಆದೇಶಗಳನ್ನು ಸ್ವೀಕರಿಸಲಾರೆ’ ಎಂದು ಹೇಳಿದ್ದಾರೆ.

Advertisement

ಅ.26ಕ್ಕೆ ಮೊದಲು ಇದ್ದ ಎಲ್ಲ ಸಚಿವರಿಗೆ ಪೊಲೀಸ್‌ ಭದ್ರತೆಯನ್ನು ಒದಗಿಸುವಂತೆ ವಿಕ್ರಮಸಿಂಘ ಸರಕಾರದಲ್ಲಿ ಕಾನೂನು ಮತ್ತು ಶಿಸ್ತು ಪಾಲನೆ ಸಚಿವರಾಗಿದ್ದ ರಂಜಿತ್‌ ಮದ್ದುಮ ಭಂಡಾರ ಅವರು ಐಜಿಪಿ ಜಯಸುಂದರ ಅವರಿಗೆ ಪತ್ರ ಬರೆದಿದ್ದರು.

ಇದಕ್ಕೆ ಉತ್ತರವಾಗಿ ಜಯಸುಂದರ ಅವರು “ನಾನು ಅಧ್ಯಕ್ಷರ ಆದೇಶಗಳನ್ನು ಮಾತ್ರವೇ ಸ್ವೀಕರಿಸುತ್ತೇನೆ; ಇನ್ಯಾರದ್ದೂ ಅಲ್ಲ’ ಎಂದು ಖಡಾಖಂಡಿತವಾಗಿ ಪ್ರತಿಕ್ರಿಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next