Advertisement

ಶ್ರೀಲಂಕೆಗೆ “ಕುಟುಂಬ ರಾಜಕೀಯ’ಬಿಗುವು

11:23 PM Jul 08, 2021 | Team Udayavani |

ಕೊಲೊಂಬೊ: ದ್ವೀಪ ರಾಷ್ಟ್ರ ಶ್ರೀಲಂಕೆಯ ಸರ್ಕಾರಕ್ಕೆ ರಾಜಪಕ್ಸ ಕುಟುಂಬದ ಮತ್ತೂಬ್ಬ ಸದಸ್ಯ, ಬಸಿಲ್‌ ರಾಜಪಕ್ಸ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ಮಹಿಂದ ರಾಜಪಕ್ಸ ಸರ್ಕಾರದಲ್ಲಿ ಅವರು ವಿತ್ತ ಸಚಿವರಾಗಲಿದ್ದಾರೆ.

Advertisement

ಹೀಗಾಗಿ, ದ್ವೀಪರಾಷ್ಟ್ರದ ಸರ್ಕಾರದಲ್ಲಿ ರಾಜಪಕ್ಸ ಕುಟುಂಬ ಸದಸ್ಯರ ಹಿಡಿತ ಬಿಗಿಯಾಗಿದೆ. ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾಗಿದ್ದ ಚುನಾವಣೆಯಲ್ಲಿ ಆಡಳಿತ ಪಕ್ಷ ಶ್ರೀಲಂಕಾ ಪೊದುಜನ ಪೆರುಮನದ ಜಯಗಳಿಸಲು ಅವರು ಮುಖ್ಯ ಭೂಮಿಕೆ ವಹಿಸಿದ್ದಾರೆ ಎಂಬ ಕಾರಣಕ್ಕೆ ಬಸಿಲ್‌ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ.

ಈ ಮೂಲಕ ರಾಜಪಕ್ಸ ಕುಟುಂದ ಐದನೇ ವ್ಯಕ್ತಿ ದ್ವೀಪ ರಾಷ್ಟ್ರದ ರಾಜಕೀಯಕ್ಕೆ ಪ್ರವೇಶಿಸಿದಂತಾಗಿದೆ. ಅಧ್ಯಕ್ಷ ಹುದ್ದೆಯಲ್ಲಿ ಗೋಟಬಯ ರಾಜಪಕ್ಸ, ಪ್ರಧಾನಿಯಾಗಿ ಅವರ ಅಣ್ಣ ಮಹಿಂದ, ಮತ್ತೂಬ್ಬ ಸಹೋದರ ಚಮಲ್‌ ನೀರಾವರಿ ಸಚಿವರಾಗಿದ್ದರೆ, ಪ್ರಧಾನಿಯವರ ಹಿರಿಯ ಪುತ್ರ ನಮಲ್‌ (35) ಯುವಜನ ಮತ್ತು ಕ್ರೀಡಾ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next