Advertisement

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ

01:22 AM Mar 07, 2018 | |

ಕೊಲಂಬೊ: ಶ್ರೀಲಂಕಾದ ಕ್ಯಾಂಡಿ ಜಿಲ್ಲೆ ಯಲ್ಲಿ ಸಿಂಹಳೀಯರು ಮತ್ತು ಮುಸ್ಲಿಮರ ನಡುವೆ ಗಲಭೆ ತೀವ್ರಗೊಂಡು, ಇಬ್ಬರು ಅಸು ನೀಗಿದ ಬೆನ್ನಲ್ಲೇ ಹತ್ತು ದಿನಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಉಗ್ರ ಸಂಘಟನೆ ಎಲ್‌ಟಿಟಿಇ ಜತೆಗಿನ ಸಮರ ಮುಕ್ತಾಯದ ಬಳಿಕ ಇದೇ ಮೊದಲ ಬಾರಿಗೆ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಲಾಗಿದೆ. ಕಳೆದ ವಾರ ಬಹುಸಂಖ್ಯಾಕ ಸಿಂಹಳೀಯ ಸಮುದಾಯದ ವ್ಯಕ್ತಿಯನ್ನು ಗುಂಪು ಹತ್ಯೆಗೈದಿತ್ತು. ಇದಾದ ಬಳಿಕ ಹಿಂಸಾ ಚಾರ ತೀವ್ರಗೊಂಡಿದೆ. 

Advertisement

ಪ್ರವಾಸಿಗರಿಂದ ತುಂಬಿರುವ ಕ್ಯಾಂಡಿ ಜಿಲ್ಲೆಯ ತಲೆನಿಯಾದಲ್ಲಿ ಸೋಮ ವಾರ ಹಿಂಸಾಚಾರ ಶುರು ವಾಗಿತ್ತು. ಮಂಗಳವಾರದ ವೇಳೆ ಅದು ಶ್ರೀಲಂಕಾದ ಇತರ ನಗರಗಳಿಗೂ ವ್ಯಾಪಿಸಿತು. ಹೀಗಾಗಿ ಅಧ್ಯಕ್ಷ ಮೈತ್ರಿಪಾಲ ಸಿರಿ ಸೇನಾ ನೇತೃತ್ವದಲ್ಲಿ ಸಭೆ ನಡೆದು, ಹತ್ತು ದಿನಗಳ ತುರ್ತು ಪರಿಸ್ಥಿತಿ ಜಾರಿ ಮಾಡಲು ನಿರ್ಧರಿಸಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಕಮಾಂಡೋಗಳನ್ನು ರವಾನಿಸಲಾಗಿದೆ. ಕ್ಯಾಂಡಿ ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next