Advertisement

ಮಂಗಳೂರಿನಲ್ಲಿ ನಾಳೆ ಭಾವೀ ಪರ್ಯಾಯ ಶ್ರೀಗಳಿಗೆ ಪೌರ ಸಮ್ಮಾನ

11:58 PM Jan 01, 2020 | Team Udayavani |

ಮಂಗಳೂರು: ಈ ಬಾರಿಯ ಪರ್ಯಾಯ ಪೀಠವೇರಲಿರುವ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಮಂಗಳೂರಿನ ಪೌರಸಮ್ಮಾನ ಜ.3ರಂದು ಸಂಜೆ 7ಕ್ಕೆ ಹೋಟೆಲ್‌ ಶ್ರೀನಿವಾಸ್‌ ಬಳಿ ಇರುವ ಶ್ರೀನಿವಾಸ ಕನ್ವೆನ್ಶನ್‌ ಹಾಲ್‌ನಲ್ಲಿ ಜರುಗಲಿದೆ.

Advertisement

ಮಂಗಳೂರಿನ ಭಕ್ತಜನರ ಅಪೇಕ್ಷೆಯಂತೆ ಜ.3ರಂದು ಸಂಜೆ ಉಭಯ ಶ್ರೀಪಾದರು ಮಂಗಳೂರು ಪುರಪ್ರವೇಶ ಮಾಡಲಿದ್ದು, ಸಂಜೆ 6ಕ್ಕೆ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ, ನಂತರ ಭವ್ಯ ಮೆರವಣಿಗೆಯಲ್ಲಿ ಸಮ್ಮಾನ ಸಭಾಂಗಣಕ್ಕೆ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಅವರು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next