Advertisement

ಹಿಂದೂ ಸಂಘಟನೆಯ ಕಾರ್ಯಕರ್ತನ ಬರ್ಬರ ಹತ್ಯೆ 

02:26 PM Nov 19, 2017 | Team Udayavani |

ಕಲಬುರಗಿ: ಜೇವರ್ಗಿಯ ನೆಲೋಗಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರೊಬ್ಬರನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆಗೈದು ಹೊಲದಲ್ಲಿ ಎಸೆಯಲಾಗಿರುವುದು ತಡವಾಗಿ ಬಯಲಾಗಿದೆ. 

Advertisement

3 ದಿನಗಳ ಹಿಂದೆ ಹತ್ಯೆಗೀಡಾಗಿ ಜಮೀನಿನಲ್ಲಿ ಶವವಾಗಿ  ಪತ್ತೆಯಾಗಿದ್ದ  ವ್ಯಕ್ತಿಯ ಗುರುತು ಪತ್ತೆಯಾಗಿದ್ದು,ಕಲಬುರಗಿಯ ದೇವಿ ಕಾಲೋನಿ ನಿವಾಸಿ  ಶರಣು ಎಂದು ತಿಳಿದು ಗುರುತಿಸಲಾಗಿದೆ.

ಕಾರು ಚಾಲಕರಾಗಿದ್ದ ಶರಣು ಶ್ರೀರಾಮ ಸೇನೆಯಲ್ಲಿ ಸಕ್ರಿಯವಾಗಿದ್ದರು ಎಂದು ತಿಳಿದು ಬಂದಿದೆ. 

ನವೆಂಬರ್‌ 17 ರಂದು ಪರೀಕ್ಷೆಗೆ ತೆರಳಲೆಂದು  ಮೂವರು ಕಾರು ಬುಕ್‌ ಮಾಡಿದ್ದರು. ಆ ಬಳಿಕ ಮಾರ್ಗ ಮಧ್ಯದಲ್ಲೇ ಶರಣು ಹತ್ಯೆಯಾಗಿದೆ. 

ಕಾರು ಬುಕ್‌ ಮಾಡಿದ ಮೂವರ ಗುರುತನ್ನುಶರಣು ಸ್ನೇಹಿತರು ಪತ್ತೆ ಹಚ್ಚಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು  ತನಿಖೆ ಮುಂದುವರಿಸಿದ್ದಾರೆ.

Advertisement

ಶವದ ಗುರುತನ್ನು ಶರಣು ಪೋಷಕರು ಪತ್ತೆ ಹಚ್ಚಿದ್ದು,ಬಳಿಕ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next