Advertisement

ಆಯ್ದ ಭಾಗಗಳಲ್ಲಿ ತುಂತುರು ಮಳೆ

06:00 AM Jul 31, 2018 | Team Udayavani |

ಬೆಂಗಳೂರು: ಕರಾವಳಿ ಸೇರಿ ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ತಗ್ಗಿದ್ದು, ಆಯ್ದ ಭಾಗಗಳಲ್ಲಿ ಮಾತ್ರ ತುಂತುರು ಮಳೆ ಬಿದ್ದಿದೆ. ರಾಜ್ಯದಲ್ಲಿ ಮುಂಗಾರು ಮಾರುತಗಳು ಬಹುತೇಕ ಕ್ಷೀಣಗೊಂಡಿವೆ. ಈ ಮಧ್ಯೆ ಹವಾಮಾನದಲ್ಲೂ ಯಾವುದೇ ಬೆಳವಣಿಗೆಗಳು ಕಂಡುಬಂದಿಲ್ಲ. ಹಾಗಾಗಿ, ಮಳೆ ಇಳಿಮುಖವಾಗಿದೆ. ಘಟ್ಟಪ್ರದೇಶ ಮತ್ತು ಕರಾವಳಿಯ ಆಯ್ದ ಭಾಗಗಳಲ್ಲಿ ಮಾತ್ರ ಜಿಟಿಜಿಟಿ ಮಳೆಯಾಗಿದೆ. 

Advertisement

ಮುಂದಿನ 48 ಗಂಟೆ ಇದೇ ವಾತಾವರಣ ಮುಂದುವರಿಯಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹುಭಾಗದಲ್ಲಿ ಮೋಡಕವಿದ ವಾತಾವರಣ ಇದೆ. ಸೋಮವಾರ ಬೆಳಗ್ಗೆ ಆಗುಂಬೆಯಲ್ಲಿ ಅತಿ ಹೆಚ್ಚು 30 ಮಿ.ಮೀ. ಮಳೆ ದಾಖಲಾಗಿದೆ. ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಉಡುಪಿ, ಕಾರ್ಕಳ, ಕೊಲ್ಲೂರಿನಲ್ಲಿ 20 ಮಿ.ಮೀ., ಮುಲ್ಕಿ, ಬೆಳ್ತಂಗಡಿ, ಸುಳ್ಯ, ಶಿರಾಲಿ
ಮತ್ತಿತರ ಕಡೆ 10 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next