Advertisement

ಗುಜರಾತ್‌ನಲ್ಲಿ ದ್ವೇಷ ಭಾಷಣ; Kajal Hindustani ಗೆ ನ್ಯಾಯಾಂಗ ಬಂಧನ

03:53 PM Apr 10, 2023 | Team Udayavani |

ಉನಾ : ಪಟ್ಟಣದಲ್ಲಿ ಕೋಮು ಘರ್ಷಣೆಗೆ ಕಾರಣವಾದ ರಾಮ ನವಮಿಯಂದು ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ಥಾನಿ ಅವರನ್ನು ಬಂಧಿಸಿದ ನಂತರ ಗುಜರಾತ್‌ನ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

Advertisement

ಭಾನುವಾರ ಉನಾದಲ್ಲಿ ಹಿಂದೂಸ್ಥಾನಿ ಪೊಲೀಸರ ಮುಂದೆ ಶರಣಾಗಿದ್ದರು. ನಂತರ ಅವರನ್ನು ಬಂಧಿಸಿ ಉನಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಉನಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎನ್‌ಕೆ ಗೋಸ್ವಾಮಿ ತಿಳಿಸಿದ್ದಾರೆ.

ಅವರನ್ನು ಜುನಾಗಢ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಗೋಸ್ವಾಮಿ ಹೇಳಿದರು. ಮಾರ್ಚ್ 30 ರಂದು ರಾಮ ನವಮಿ ಹಬ್ಬದಂದು ಹಿಂದೂಸ್ಥಾನಿ ಅವರು ಮಾಡಿದ ಭಾಷಣವು ಎಪ್ರಿಲ್ 1 ರ ರಾತ್ರಿ ಉನಾ ಪಟ್ಟಣದಲ್ಲಿ ಕೋಮು ಘರ್ಷಣೆಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next