Advertisement

ಮಹಾಲಿಂಗೇಶ್ವರ ದೇಗುಲದಲ್ಲಿ ಪೂಕರೆ ಉತ್ಸವ

03:20 AM Dec 04, 2018 | Team Udayavani |

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ರವಿವಾರ ರಾತ್ರಿ ಪೂಕರೆ ಉತ್ಸವವು ಪೂರ್ವ ಶಿಷ್ಟ ಸಂಪ್ರದಾಯದಂತೆ ನಡೆಯಿತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಯವರು ಉತ್ಸವದ ವಿಧಿ ವಿಧಾನಗಳನ್ನು ನೆರವೇರಿಸಿದರು. ರಾತ್ರಿ ದೇವಾಲಯದ ಒಳಾಂಗಣದಲ್ಲಿ  ಶ್ರೀ ದೇವರ ಬಲಿ ಉತ್ಸವದ ಬಳಿಕ ದೇವರು ಕೆರೆಯ ಬಳಿಯಿಂದ ನಂದಿಯ ಜತೆ ಪೇಟೆ ಸವಾರಿ ಹೊರಟು ನೆಲ್ಲಿಕಟ್ಟೆಯ ಪೂಕರೆ ಕಟ್ಟೆಯಲ್ಲಿ ಕುಳಿತ ಬಳಿಕ ತಂತ್ರಿಯವರು ಮೂಲ ನಾಗಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

Advertisement

ನಾಗನ ಕಟ್ಟೆಯಲ್ಲಿ ಪೂಜೆಯ ಅನಂತರ ದೇವಾಲಯದ ಗದ್ದೆಯಲ್ಲಿ ಅಳವಡಿಸಿದ ಎರಡು ಪೂಕರೆಗೆ ಭಕ್ತರು ಸೇರಿ ಪ್ರಾರ್ಥನೆ ಸಲ್ಲಿಸಿ ವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಎರಡು ಗದ್ದೆಗಳಿಗೆ ಪೂಕರೆಯನ್ನು ಕೊಂಡೊಯ್ಯಲಾಯಿತು.

ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಎನ್‌.ಕೆ. ಜಗನ್ನಿವಾಸ್‌ ರಾವ್‌, ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ, ಸದಸ್ಯರಾದ ಜಾನು ನಾಯ್ಕ, ಯು.ಪಿ. ರಾಮಕೃಷ್ಣ, ಕರುಣಾಕರ ರೈ, ಸಂಜೀವ ನಾಯಕ್‌ ಕಲ್ಲೇಗ, ರೋಹಿಣಿ ಆಚಾರ್ಯ, ನಯನಾ ರೈ, ಪ್ರಮುಖರಾದ ಕಿಟ್ಟಣ್ಣ ಗೌಡ, ಚಿದಾನಂದ ಬೈಲಾಡಿ, ರಮೇಶ್‌ ಬಾಬು, ರಾಜೇಶ್‌ ಬನ್ನೂರು, ಪಿ.ಜಿ. ಜಗನ್ನಿವಾಸ್‌ ರಾವ್‌, ಅರುಣ್‌ ಕುಮಾರ್‌ ಪುತ್ತಿಲ, ಯು.ಲೋಕೇಶ್‌ ಹೆಗ್ಡೆ, ಭಾಸ್ಕರ ಬಾರ್ಯ ಸಹಿತ ನೂರಾರು ಭಕ್ತರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next