Advertisement

ಜೀವ ಹಿಂಡದಿರಲಿ ಜೀವನ ರೂಪಿಸುವ ಪರೀಕ್ಷೆಗಳು !!

11:40 AM Mar 04, 2017 | Team Udayavani |

ಮಣಿಪಾಲ: ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟವೆಂದೆಣಿಸಿರುವ ಪರೀಕ್ಷೆಗಳನ್ನು ಎದುರಿಸುವಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅದೇನೋ ಆತಂಕ, ಭಯ ಇದ್ದೇ ಇರುತ್ತದೆ. ವರ್ಷವಿಡೀ ಗಮನವಿಟ್ಟು ಪಾಠವನ್ನು ಕೇಳಿ, ಚೆನ್ನಾಗಿ ಅಭ್ಯಾಸಮಾಡಿದ್ದರೂ ಪರೀಕ್ಷೆ ಸಮಯ ಬಂತೆಂದರೆ ಎಲ್ಲಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವುದೋ ಒಂದು ರೀತಿಯ ಅಗೋಚರ ಭಯ ಕಾಣಿಸಿಕೊಳ್ಳುತ್ತದೆ. ಈ ಭಯವನ್ನು ಹೋಗಲಾಡಿಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸುವಂತೆ ಮಾಡುವ ನಿಟ್ಟಿನಲ್ಲಿ ಉದಯವಾಣಿ.ಕಾಂ ಪ್ರಸ್ತುತಪಡಿಸುತ್ತಿದೆ ಒಂದು ವಿಶೇಷ ಫೆಸುºಕ್‌ ಲೈವ್‌ ಚರ್ಚಾ ಕಾರ್ಯಕ್ರಮ.

Advertisement

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಲು ಮಾನಸಿಕವಾಗಿ ಸಜ್ಜುಗೊಳಿಸಲಿದ್ದಾರೆ ಖ್ಯಾತ ಮನೋವೈದ್ಯರಾಗಿರುವ ಡಾ. ವಿರೂಪಾಕ್ಷ ದೇವರಮನೆ ಹಾಗೂ ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಮನೋಜ್‌ ಕಡಬ ಅವರು.

Advertisement

Udayavani is now on Telegram. Click here to join our channel and stay updated with the latest news.

Next