Advertisement

ಬಂಟ್ಸ್‌ ಪ್ರೀಮಿಯರ್‌ ಲೀಗ್‌ಗೆ ವಿಶೇಷ ಅನುದಾನ

01:12 PM May 18, 2019 | Team Udayavani |

ಮುಂಬಯಿ:ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್‌ ಶೆಟ್ಟಿ ಅವರ ಯೋಜನೆಗಳಲ್ಲಿ ಒಂದಾದ ಕ್ರೀಡಾ ಪ್ರೋತ್ಸಾಹದ ಅಂಗವಾಗಿ ಯೂತ್‌ ಬಂಟ್ಸ್‌ ಮಂಗಳೂರು ಇವರ ಬಂಟ್ಸ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಗೆ ಒಕ್ಕೂಟದ ಸಹಯೋಗದಿಂದ ವಿಶೇಷ ಅನುದಾನ 50 ಸಾವಿರ ರೂಪಾಯಿಯನ್ನು ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಜತೆ ಕಾರ್ಯದರ್ಶಿ ಸಂಕಬೈಲ್‌ ಸತೀಶ್‌ ಅಡಪ್ಪ ಹೇಮಂತ್‌ ಶೆಟ್ಟಿ ಅವರ ಜತೆಗೆ ಬಿಡುಗಡೆ ಮಾಡಲಾಯಿತು.

Advertisement

ಮೇ 14ರಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಒಕ್ಕೂಟದ ಕಚೇರಿಯಲ್ಲಿ ಇಂಟರ್‌ನ್ಯಾಶನಲ್‌ ಬಂಟ್ಸ್‌ ವೆಲ್ಫೆàರ್‌ ಟ್ರಸ್ಟ್‌ನ ಯುವ ವಿಭಾಗದ ಮುಖ್ಯಸ್ಥ ದೇವಿಚರಣ್‌ ಶೆಟ್ಟಿ , ಪ್ರಸಾದ್‌ ಶೆಟ್ಟಿ, ಸಚಿನ್‌ ರಾಜ್‌ ರೈ ಅವರಿಗೆ ಚೆಕ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next