Advertisement

ಕಲ್ಯಾಣ್‌ ಜ್ಯುವೆಲ್ಲರ್ಸ್‌ನ ಟಿ.ಎಸ್‌.ಕಲ್ಯಾಣರಾಮನ್‌ಗೆ ವಿಶೇಷ ಪ್ರಶಸ್

06:23 AM Feb 23, 2019 | Team Udayavani |

ಬೆಂಗಳೂರು: ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿರುವ 44ನೇ ಇಂಟರ್‌ನ್ಯಾಷನಲ್‌ ಅಡ್ವಟೈìಸಿಂಗ್‌ ಅಸೋಸಿಯೇಷನ್‌(ಐಎಎ)ನ ಜಾಗತಿಕ ಸಮಾವೇಶದಲ್ಲಿ ಕಲ್ಯಾಣ್‌ ಜ್ಯುವೆಲ್ಲರ್ಸ್‌ನ ಸ್ಥಾಪಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್‌. ಕಲ್ಯಾಣರಾಮನ್‌ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Advertisement

ಕಲ್ಯಾಣ್‌ ಜ್ಯುವೆಲ್ಲರ್ಸ್‌ ಅನ್ನು ಜಾಗತಿಕ ಮನ್ನಣೆಯ ಬ್ರಾಂಡ್‌ ಆಗಿ ಬದಲಿಸಿರುವ ಹಾಗೂ ಕೇರಳದ ಪ್ರಾದೇಶಿಕ ಮಟ್ಟದಲ್ಲಿದ್ದ ಬ್ರಾಂಡ್‌ ಅನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ಅವರು ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ಸಂದಿದೆ. ಬಾಲಿವುಡ್‌ ಸೂಪರ್‌ಸ್ಟಾರ್‌ ಹಾಗೂ ಕಲ್ಯಾಣ್‌ ಜ್ಯುವೆಲ್ಲರ್ಸ್‌ನ ರಾಷ್ಟ್ರೀಯ ಬ್ರಾಂಡ್‌ ರಾಯಭಾರಿಯಾಗಿರುವ ಅಮಿತಾಭ್‌ ಬಚ್ಚನ್‌ ಅವರೇ ಟಿ.ಎಸ್‌. ಕಲ್ಯಾಣರಾಮನ್‌ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲ್ಯಾಣರಾಮನ್‌, “ನಾನು ಈ ಪ್ರಶಸ್ತಿಯನ್ನು ನಮ್ಮ ಗ್ರಾಹಕರಿಗೆ ಅರ್ಪಿಸಲು ಬಯಸುತ್ತೇನೆ. ಏಕೆಂದರೆ, ಅವರ ಬೆಂಬಲವಿಲ್ಲದೇ ನಮ್ಮ ಸಂಸ್ಥೆಯು ಈ ಮಟ್ಟಕ್ಕೇರಲು ಸಾಧ್ಯವಾಗುತ್ತಿರಲಿಲ್ಲ. ಕೇರಳದಲ್ಲಿ ಏಕೈಕ ಮಳಿಗೆಯನ್ನು ಹೊಂದಿದ್ದ ನಾವು, ಈಗ ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ, ವಿವಿಧ ದೇಶಗಳಲ್ಲೂ ಮಳಿಗೆಯನ್ನು ಹೊಂದಿದ್ದೇವೆ.

ಈ ರೀತಿ ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿದ್ದ ಬ್ರಾಂಡ್‌ ಜಾಗತಿಕ ಮಟ್ಟಕ್ಕೇರಲು ಗ್ರಾಹಕರು ನಮ್ಮ ಮೇಲಿಟ್ಟಿರುವ ವಿಶ್ವಾಸವೇ ಕಾರಣ’ ಎಂದಿದ್ದಾರೆ. ಅಲ್ಲದೆ, ಶಿವರಾಜ್‌ ಕುಮಾರ್‌, ನಾಗಾರ್ಜುನ, ಪ್ರಭು, ಮಂಜು ವಾರಿಯರ್‌ರಂತಹ ಸೆಲೆಬ್ರಿಟಿಗಳಿಗೆ ಆಯಾ ರಾಜ್ಯಗಳಲ್ಲಿ ಅವರದ್ದೇ ಆದ ಅಭಿಮಾನಿಗಳಿದ್ದು, ಇವರನ್ನು ಬ್ರಾಂಡ್‌ ರಾಯಭಾರಿಗಳಾಗಿ ನೇಮಿಸಿದ್ದು ಕೂಡ ನಮ್ಮ ಬ್ರಾಂಡ್‌ನ‌ ಯಶಸ್ಸಿಗೆ ಕಾರಣವಾಯಿತು ಎಂದೂ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next