Advertisement

ಎಸ್‌ಪಿಬಿ ಗಾನಸುಧೆ

08:10 PM Feb 28, 2020 | Lakshmi GovindaRaj |

ಗಾಡ್ಸ್‌ ಸ್ಪೆಷಲ್‌ ಚಿಲ್ಡ್ರನ್‌ ಫೌಂಡೇಷನ್‌ ವತಿಯಿಂದ, ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಲೈವ್‌ ಸಂಗೀತ ಕಛೇರಿ ಆಯೋಜಿಸಲಾಗಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಡುಗಳ ಮೂಲಕ ಎಸ್‌ಪಿಬಿ, ನೆರೆದವರ ಮನರಂಜಿಸಲಿದ್ದಾರೆ. ಆದರೆ, ಇದು ಮನೋರಂಜನೆಯ ಉದ್ದೇಶದಿಂದ ನಡೆಯುತ್ತಿರುವ ಕಾರ್ಯಕ್ರಮವಲ್ಲ.

Advertisement

ಸೆರೆಬ್ರಲ್‌ ಪಾಲ್ಸಿ ಮತ್ತು ಆಟಿಸಂ ರೋಗಗಳಿಂದ ನರಳುತ್ತಿರುವ ಮಕ್ಕಳಿಗೆ ಆರ್ಥಿಕವಾಗಿ ನೆರವಾಗಲು, ಆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಯಲಿರುವ ಸಂಗೀತ ಸಂಜೆ ಇದು. ಸಂಗೀತ ನಿರ್ದೇಶಕರಾದ ಬಿ.ವಿ. ಶ್ರೀನಿವಾಸ್‌, ಪ್ರವೀಣ್‌ ಡಿ.ರಾವ್‌, ಡ್ರಮ್ಮರ್‌ ಅರುಣ್‌, ಗಾಯಕಿಯರಾದ ಎಂ.ಡಿ. ಪಲ್ಲವಿ, ಅನುರಾಧಾ ಭಟ್‌ ಮತ್ತು ಗಾಯಕ ಚಿನ್ಮಯ್‌ ಆತ್ರೇಯಾಸ್‌, ಆರ್ಕೆಸ್ಟ್ರಾದಲ್ಲಿ ಇರಲಿದ್ದಾರೆ.

ಎಲ್ಲಿ?: ಚೌಡಯ್ಯ ಮೆಮೋರಿಯಲ್‌ ಹಾಲ್‌
ಯಾವಾಗ?: ಫೆ.29, ಶನಿವಾರ ಸಂಜೆ 6
ಟಿಕೆಟ್‌ ದರ: 1000 ರೂ.

Advertisement

Udayavani is now on Telegram. Click here to join our channel and stay updated with the latest news.

Next