Advertisement

ಸ್ಪಂದನ ಬ್ಯುಸಿನೆಸ್ ಅವಾರ್ಡ್ 2017 ಪ್ರದಾನ

07:56 AM Apr 09, 2018 | Harsha Rao |

ಮಂಗಳೂರು: ಪ್ರತಿಷ್ಠಿತ ಸ್ಪಂದನ ಚಾನೆಲ್, ಕರ್ಣಾಟಕ ಬ್ಯಾಂಕ್ ಹಾಗೂ ಅದಾನಿ ಗ್ರೂಪ್ ಸಹಯೋಗದಲ್ಲಿ ನೀಡುವ “ಸ್ಪಂದನ ಬ್ಯುಸಿನೆಸ್ ಅವಾರ್ಡ್ – 2017′ ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ಓಶಿಯನ್ ಪರ್ಲ್ ಹೊಟೇಲ್ನಲ್ಲಿ ಶುಕ್ರವಾರ ನಡೆಯಿತು.

Advertisement

ಉದ್ಯಮ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಉದ್ಯಮಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ಕೆಲವು ವರ್ಷಗಳಿಂದ ಈ ಬಿಸಿನೆಸ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅದ ರಂತೆ ಈ ಬಾರಿ ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ ಅವರಿಗೆ “ಅತ್ಯುತ್ತಮ ಮಹಿಳಾ ಉದ್ಯಮಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರತಿಷ್ಠಿತ ಈ ಬಾರಿಯ ಸ್ಪಂದನ ಬಿಸಿನೆಸ್ ಅವಾರ್ಡ್ ಸಮಾರಂಭವನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ರಾವ್ ಉದ್ಘಾಟಿಸುವ ಜತೆಗೆ ಹಲವು ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ| ರಾಜೇಂದ್ರ ಕುಮಾರ್, ಅದಾನಿ ಗ್ರೂಪ್ನ ನಿರ್ದೇಶಕ ಕಿಶೋರ್ ಆಳ್ವ, ಸ್ಪಂದನ ವಾಹಿನಿಯ ಮುಖ್ಯಸ್ಥ ವಿಲಾಸ್ ನಾಯಕ್, ಜ್ಯೋತಿ ಲ್ಯಾಬೊರೇಟರಿಯ ಉಲ್ಲಾಸ್ ಕಾಮತ್, ಶಾಸಕ ಜೆ.ಆರ್. ಲೋಬೋ, ನಂದ ಗೋಪಾಲ್ ಶೆಣೈ, ಹ್ಯಾಂಗ್ಯೋ ಐಸ್ಕ್ರೀಂನ ಪ್ರದೀಪ್ ಜಿ. ಪೈ, ನ್ಯಾಚುರಲ್ ಐಸ್ಕ್ರೀಂನ ರಘುನಂದನ್ ಕಾಮತ್, ಪ್ರಕಾಶ್ ಪೈ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಉದ್ಯಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳಾ ಹಾಗೂ ಪುರುಷರನ್ನು ಪ್ರತ್ಯೇಕವಾಗಿ  ಗುರುತಿಸಿ ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next