Advertisement

ಇವಿಎಂ ಸ್ಟ್ರಾಂಗ್ ರೂಮ್ ಕಾಯಲು ಎಸ್ ಪಿ ಕಾರ್ಯಕರ್ತರ ಮೂರು ಪಾಳಿಗಳ ಕೆಲಸ !

03:10 PM Mar 08, 2022 | Team Udayavani |

ಲಕ್ನೋ : ದೇಶದ ಅತೀ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಮತದಾನ ಮುಕ್ತಾಯವಾಗಿ ಹಲವು ಸಮೀಕ್ಷೆಗಳು ಹೊರಬಿದ್ದಿದ್ದು, ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಹೇಳಲಾಗಿದೆಯಾದರೂ ಸಮಾಜವಾದಿ ಪಕ್ಷ ಇನ್ನೂ ಅಧಿಕಾರಕ್ಕೆ ನಾವೇ ಬರುತ್ತೇವೆ ಎಂದು ಹೇಳುವುದನ್ನು ನಿಲ್ಲಿಸಿಲ್ಲ.

Advertisement

ಹಸ್ತಿನಾಪುರದ ಎಸ್‌ಪಿ ಅಭ್ಯರ್ಥಿ ಯೋಗೇಶ್ ವರ್ಮಾ ಮಾತನಾಡಿ, “ಇವಿಎಂ ಸ್ಟ್ರಾಂಗ್ ರೂಮ್ ಮತ್ತು ಅದರ ಸುತ್ತಲಿನ ಇತರ ಚಲನವಲನಗಳ ಮೇಲೆ ನಿಗಾ ಇಡಲು ಎಸ್‌ಪಿ ಮುಖ್ಯಸ್ಥರು ನಮಗೆ ಆದೇಶಿಸಿದ್ದಾರೆ. ನಾವು 8 ಗಂಟೆಗಳ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ಮತ್ತೆ ಚುನಾವಣಾ ಅಧಿಕಾರಿಗಳ ಕುರಿತಾಗಿ ಸಂಶಯ ಹೊರ ಹಾಕಿದ್ದಾರೆ.

ಇದನ್ನೂ ಓದಿ :ಕಾದು ನೋಡೋಣ: ಚುನಾವಣೋತ್ತರ ಸಮೀಕ್ಷೆಗಳ ಬಳಿಕ ಪ್ರಿಯಾಂಕಾ ಗಾಂಧಿ

ನಮಗೆ ಎಕ್ಸಿಟ್ ಪೋಲ್‌ಗಳಲ್ಲಿ ನಂಬಿಕೆ ಇಲ್ಲ, ಅಖಿಲೇಶ್ ಯಾದವ್ ಸಿಎಂ ಆಗುತ್ತಾರೆ. ನಾವು ಸರ್ಕಾರ ರಚಿಸುತ್ತೇವೆ. ಬಹುಮತ ಬರುವುದು ನಮಗೆ ಎಂದು ವರ್ಮಾ ಹೇಳಿದ್ದಾರೆ.

Advertisement

ಮೀರತ್ ಜಿಲ್ಲೆಯ ಹಸ್ತಿನಾಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಯೋಗೇಶ್ ವರ್ಮಾ,  ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿ ಇವಿಎಂ ಸ್ಟ್ರಾಂಗ್ ರೂಂ ಬಳಿ ದುರ್ಬೀನು ಹಿಡಿದು ಸ್ವತಃ ಅವರೇ ಕಾಯುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next