Advertisement

ಮೂರು ದಿನಗಳ ಮೊದಲೇ ಅಂಡಮಾನ್‌ಗೆ ಮುಂಗಾರು

10:01 AM May 15, 2017 | Team Udayavani |

ಹೊಸದಿಲ್ಲಿ: ನಿರೀಕ್ಷೆಗೂ ಮೊದಲೇ ನೈಋತ್ಯ ಮುಂಗಾರು ಭಾರತದ ಅಂಡಮಾನ್‌-ನಿಕೋಬಾರ್‌ ದ್ವೀಪ ಸಮೂಹ ಪ್ರವೇಶಿಸಿದೆ. ನೈಋತ್ಯ ದಿಕ್ಕಿನಿಂದ ಗಾಳಿ ಪ್ರಬಲವಾಗುತ್ತಿದ್ದು ರವಿವಾರ ಅಂಡಮಾನ್‌ ಇಡೀ ದ್ವೀಪ ಸಮೂಹವನ್ನು ಮೋಡಗಳು ಆವರಿಸಿದ್ದು, ಉತ್ತಮ ಮಳೆಯನ್ನೂ ಸುರಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆದರೆ ಕೇರಳ ಕರಾವಳಿಯನ್ನು ಮುಂಗಾರು ಯಾವಾಗ ತಲುಪಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮೋಡಗಳ ಚಲನೆ ಮತ್ತು ಗಾಳಿಯನ್ನು ಅನುಸರಿಸಿ ಮುಂಗಾರು ಒಂದು ದಿನ ಮೊದಲು ಅಥವಾ ಜೂ.1, 2ರ ಬಳಿಕ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ರಮೇಶ್‌ ಹೇಳಿದ್ದಾರೆ.

Advertisement

ಬಂಗಾಲದಲ್ಲಿ ಮುಂಗಾರು ಲಕ್ಷಣಗಳು ಮತ್ತಷ್ಟು ಬಲಗೊಳ್ಳುತ್ತಿವೆ. ಇದು ವಿಸ್ತರಿಸಿಕೊಳ್ಳುತ್ತಿದ್ದು, ಅಂಡಮಾನ್‌ನಾದ್ಯಂತ ಚಾಚಿಕೊಂಡಿದೆ. ಮುಂದಿನ 72 ಗಂಟೆಗಳಲ್ಲಿ ಅಂಡಮಾನ್‌ ದ್ವೀಪ ಸಮೂಹ ಮತ್ತು ಪೂರ್ವ-ಮಧ್ಯ ಬಂಗಾಲಕೊಲ್ಲಿ ಭಾಗದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಂಡಮಾನ್‌ನಲ್ಲಿ ಸಮುದ್ರ ಕೂಡ ಪ್ರಕ್ಷುಬ್ದವಾಗಿದ್ದು, ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸಾಮಾನ್ಯವಾಗಿ ಜೂ.1ರ ವೇಳೆಗೆ ಕೇರಳದ ಮೂಲಕ ಮುಂಗಾರು ಪ್ರವೇಶಿಸುತ್ತದೆ. ಅದಕ್ಕೂ ಮೊದಲು ಮೇ 17ರಂದು ಅಂಡಮಾನ್‌ ದ್ವೀಪ ಸಮೂಹವನ್ನು ಮುಂಗಾರು ಪ್ರವೇಶಿಸುತ್ತದೆ. ಸ್ಕೈಮೆಟ್‌ ಖಾಸಗಿ ಹವಾಮಾನ ಸಂಸ್ಥೆ ಪ್ರಕಾರ ಈ ಬಾರಿ ಜೂ.1ರ ಆಸುಪಾಸಿನಲ್ಲಿ ಮುಂಗಾರು ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next