Advertisement

ಶಬರಿಮಲೆ ಯಾತ್ರಿಗಳಿಗಾಗಿ ಚೆನ್ನೈನಿಂದ 5 ವಿಶೇಷ ರೈಲು

09:57 AM Nov 10, 2019 | Team Udayavani |

ಚೆನ್ನೈ: ಶಬರಿಮಲೆ ಯಾತ್ರೆಗೆ ಸಜ್ಜಾಗಿರುವ ಭಕ್ತರ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆ ಚೆನ್ನೈನಿಂದ ವಿಶೇಷ ರೈಲುಗಳನ್ನು ಪರಿಚಯಿಸಿದೆ. ಚೆನ್ನೈ- ತಿರುವನಂತಪುರಂ ಮತ್ತು ಚೆನ್ನೈ-ಕೊಲ್ಲಂ ನಡುವೆ ನವೆಂಬರ್‌ ಮಧ್ಯದಿಂದ ಡಿಸೆಂಬರ್‌ ಆರಂಭದವರೆಗೆ ಸಂಚರಿಸಲಿವೆ.

Advertisement

ದಕ್ಷಿಣ ರೈಲ್ವೆಯು ಚೆನ್ನೈ ಮತ್ತು ತಿರುವನಂತಪುರಂ ನಡುವೆ ಎರಡು ವಿಶೇಷ ರೈಲು ಓಡಿಸಲಿದೆ. ಈ ರೈಲುಗಳು ನ.21 ಮತ್ತು 28 ರಂದು ಸಂಜೆ 7 ಗಂಟೆಗೆ ಚೆನ್ನೈ ಸೆಂಟ್ರಲ್‌ನಿಂದ ಹೊರಡಲಿದ್ದು, ನ.22 ಮತ್ತು 29ರಂದು ಬೆಳಗ್ಗೆ 11.45ಕ್ಕೆ ತಿರುವನಂತಪುರ ತಲುಪಲಿವೆ. ವಿಶೇಷ ರೈಲುಗಳು ಅರಕ್ಕೋಣಂ, ಕಟ್ಪಾಡಿ, ಜೋಲಾರ್‌ಪೇಟ್‌, ಸೇಲಂ, ಕೊಯಮತ್ತೂರು ಮತ್ತು ಪಾಲಕ್ಕಾಡ್‌ನ‌ಲ್ಲಿ ನಿಲುಗಡೆ ಮಾಡಲಿವೆ.

ಇನ್ನು ತಿರುವನಂತಪುರದಿಂದ ನ.20, 27ರಂದು ಮಧ್ಯಾಹ್ನ 3.45ಕ್ಕೆ ಹೊರಟು, ಕ್ರಮವಾಗಿ 21, 28ರಂದು ಬೆ.9.45ಕ್ಕೆ ಚೆನ್ನೈಸೆಂಟ್ರಲ್‌ ತಲುಪಲಿವೆ.
ಮೂರು ರೈಲು: ಚೆನ್ನೈ ಮತ್ತು ಕೊಲ್ಲಂ ನಡುವೆ 3 ವಿಶೇಷ ರೈಲು ಸಂಚರಿಸಲಿವೆ. ನ.15, 22 ಮತ್ತು 29ರಂದು ರಾತ್ರಿ 8.30ಕ್ಕೆ ಚೆನ್ನೈ ಸೆಂಟ್ರಲ್‌ನಿಂದ ಹೊರಟು, ಕ್ರಮವಾಗಿ 16, 23, 30ರಂದು ಮ. 12 ಗಂಟೆಗೆ ಕೊಲ್ಲಂ ತಲುಪಲಿವೆ.

Advertisement

Udayavani is now on Telegram. Click here to join our channel and stay updated with the latest news.

Next