Advertisement

ಬಿಎಸ್ ವೈ ಮೊಮ್ಮಗಳ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ?

02:35 PM Jan 28, 2022 | Team Udayavani |

ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ (30) ಶುಕ್ರವಾರ ನೇಣಿಗೆ ಶರಣಾಗಿದ್ದಾರೆ. ಅವರ ಸಾವಿನ ಸುತ್ತ ಅನುಮಾನ ಸೃಷ್ಟಿಯಾಗಿದೆ.

Advertisement

ಯಡಿಯೂರಪ್ಪ‌ ಮೊದಲ‌ ಪುತ್ರಿ ಪದ್ಮಾವತಿ ಅವರ ಪುತ್ರಿ ಸೌಂದರ್ಯಗೆ  2018 ರಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮಾಜಿ‌ ಅಧ್ಯಕ್ಷ ಮರಿಸ್ವಾಮಿ ಅಣ್ಣನ ಮಗ ನೀರಜ್ ಜತೆ ಮದುವೆಯಾಗಿತ್ತು. ಇಬ್ಬರ ನಡುವೆ ಕೌಟುಂಬಿಕ ಕಲಹ ಇತ್ತು  ಈ‌ ಕಾರಣಕ್ಕಾಗಿ ಆತ್ಮಹತ್ಯೆ ನಡೆದಿದೆ ಎನ್ನಲಾಗಿತ್ತಿದೆ. ಆದರೆ ಘಟನಾ ಸ್ಥಳದ ಅವಲೋಕನೆ ಹಲವು ಅನುಮಾನ ಸೃಷ್ಟಿಸಿದೆ.ಸೌಂದರ್ಯ ಹಾಗೂ ಅವರ ಪತಿ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು.

ಇದನ್ನೂ ಓದಿ :ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು!

ಮಗುವನ್ನು ಮತ್ತೊಂದು ರೂಮಿನಲ್ಲಿ ಮಲಗಿಸಿ ಮನೆಯ ರೂಮ್ ನಲ್ಲಿ ಇದ್ದ ಫ್ಯಾನ್ ಗೆ ಸೌಂದರ್ಯ ನೇಣಿಗೆ ಶರಣಾಗಿದ್ದಾರೆ.. ಆಸ್ಪತ್ರೆಗೆ ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದು 12 ಘಂಟೆ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ.

ಬೆಳಿಗ್ಗೆ 1೦ ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪತಿ 8 ಗಂಟೆಗೆ ಕೆಲಸಕ್ಕೆ ತೆರಳಿದ್ದರು. ಕೆಲಸದವರು ಪದೇಪದೇ ಬಾಗಿಲು ಬಡಿದರೂ ಬಾಗಿಲು ತೆರೆದಿಲ್ಲ.  ಪತಿಗೆ ಫೋನ್ ಮಾಡಿ ಕೆಲಸದವರು ಹೇಳಿದ್ದು, ಅವರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಹೈಗ್ರೌಂಡ್ಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next