Advertisement

“ಸೋನಿಯಾ ಹೇಳಿಕೆ ಅಸಮಂಜಸ’: ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನ್ಕರ್‌

10:35 PM Dec 22, 2022 | Team Udayavani |

ನವದೆಹಲಿ: “ಸರ್ಕಾರವು ನ್ಯಾಯಾಂಗವನ್ನು ಅಮಾನ್ಯಗೊಳಿಸಲು ಪ್ರಯತ್ನಿಸುತ್ತಿದೆ’ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಡಿರುವ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನ್ಕರ್‌, “ಇದೊಂದು ಅಸಮಂಜಸ ಹೇಳಿಕೆ,’ ಎಂದು ಹೇಳಿದರು.

Advertisement

“ನ್ಯಾಯಾಂಗವನ್ನು ಅಮಾನ್ಯಗೊಳಿಸುವುದು ಚಿಂತನೆಗೆ ಮೀರಿದ್ದು. ಇದು ಅಸಮಂಜಸ ಹೇಳಿಕೆಯಾಗಿದ್ದು, ಪ್ರಜಾ ಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ನ್ಯಾಯಾಂಗವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ,’ ಎಂದೂ ಧನ್ಕರ್‌ ಹೇಳಿದರು.

“ಉನ್ನತ ಸಾಂವಿಧಾನಿಕ ಕಚೇರಿಗಳನ್ನು ರಾಜಕೀಯ ನಾಯಕರು ಪಕ್ಷಪಾತದ ನಿಲುವುಗಳಿಗೆ ಬಳಸಿಕೊಳ್ಳಬಾರದು. ಇದನ್ನು ನಾಯಕರು ಮನಸಿನಲ್ಲಿಟ್ಟುಕೊಳ್ಳ ಬೇಕು ಎಂದು ನಾನು ಒತ್ತಾಯಿಸುತ್ತೇನೆ ಮತ್ತು ನಿರೀಕ್ಷಿಸುತ್ತೇನೆ,’ ಎಂದೂ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next