Advertisement

ಕದ್ರಿ ಉದ್ಯಾನವನದಲ್ಲಿ ‘ಸೋಣದ ಜೋಗಿ’ಪ್ರದರ್ಶನ, ಉಪನ್ಯಾಸ

11:22 AM Sep 17, 2018 | |

ಮಹಾನಗರ: ತುಳುವೆರೆ ಆಯನೊ ಕೂಟ ಕುಡ್ಲ ಇದರ ನೇತೃತ್ವದಲ್ಲಿ ‘ಸೋಣದ ಜೋಗಿ’ ಪ್ರದರ್ಶನ ಮತ್ತು ಉಪನ್ಯಾಸ ಇತ್ತೀಚೆಗೆ ಕದ್ರಿ ಉದ್ಯಾನವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಡಾ| ಆರೂರು ಪ್ರಸಾದ್‌ ರಾವ್‌ ಮಾತನಾಡಿ, ಹಳ್ಳಿಯಲ್ಲಿ ನಡೆಯುವ ಸೋಣದ ಜೋಗಿಯನ್ನು ಪೇಟೆಯ ಜನರಿಗೂ ತಿಳಿಸುವ ಕಾರ್ಯ ಅಭಿನಂದನೀಯ ಎಂದರು. ಅಧ್ಯಕ್ಷತೆಯನ್ನು ದಯಾನಂದ ಕತ್ತಲ್‌ ಸಾರ್‌ ವಹಿಸಿದ್ದರು.

Advertisement

ದೈವಾರಾಧನೆ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಕುಲಾಲ್‌, ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ|ಸದಾನಂದ ಪೆರ್ಲ, ಉದ್ಯಮಿ ಎಚ್‌. ಕೆ. ಪುರುಷೋತ್ತಮ್‌, ನ್ಯಾಯವಾದಿ ರಾಮಪ್ರಸಾದ್‌, ತುಳುವೆರೆ ಆಯನೊ ಕೂಟದ ಶ್ರೀನಿವಾಸ ಆಳ್ವ, ಡಾ| ರಾಜೇಶ್‌ ಆಳ್ವ ಬದಿಯಡ್ಕ, ಆಶಾ ಶೆಟ್ಟಿ ಅತ್ತಾವರ, ರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಕಿಶೋರ್‌ ಕುಮಾರ್‌ ರೈ ಶೇಣಿ ಉಪಸ್ಥಿತರಿದ್ದರು. ಪೆರ್ಲದ ಸುರೇಶ್‌, ಸುನಿಲ್‌, ನಾರಾಯಣ ಬಳಗ ಸೋಣದ ಜೋಗಿ ಪ್ರದರ್ಶನ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next