Advertisement

ಸೋಂಕಿಗೆ ತಾಯಿ ಬಲಿ, ಹೃದಯಾಘಾತದಿಂದ ಮಗ ಸಾವು

12:45 PM May 12, 2021 | Team Udayavani |

ಮಂಡ್ಯ: ಕೊರೊನಾ ಸೋಂಕಿಗೊಳಗಾಗಿ ತಾಯಿ ಸಾವನ್ನಪ್ಪಿದರೆ, ಮತ್ತೂಂದೆಡೆ ಸೋಂಕಿಗೊಳಗಾದ ತಾಯಿಯ ಬಗ್ಗೆ ಯೋಚಿಸುತ್ತಾ ಊಟ ಬಿಟ್ಟಿದ್ದ ಮಗ ಹೃದಯಾ ಘಾತದಿಂದ ಅಸುನೀಗಿದ ಘಟನೆ ನಗರದಲ್ಲಿ ನಡೆದಿದೆ.

Advertisement

ಸುಭಾಷ್‌ನಗರದ ನಿವಾಸಿ ಸುಜಾತ ಹಾಗೂ ಆಕೆಯ ಪುತ್ರ ಸಿ.ಎನ್‌.ರಮೇಶ್‌ ಮೃತರು. ಸುಜಾತ ಅವರು ಮೇ 7ರಂದು ಸೋಂಕಿನ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು.ಆ ನಂತರ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೆ ಕೀಲಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಕಳೆದೆರಡು ದಿನಗಳ ಹಿಂದೆ ಸುಜಾತ ಅವರು ಉಸಿರಾಟದ ಸಮಸ್ಯೆ ಕಾಣಿಸಿಕೊಂಡು,ಆಕ್ಸಿಜನ್‌ ಸಿಗದೆ, ಚಿಕಿತ್ಸೆ ಫ‌ಲಕಾರಿಯಾದೆ ಸೋಮವಾರ ರಾತ್ರಿ ಕೊನೆಯುಸಿರೆಳೆದರು. ತಾಯಿ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದಹಿನ್ನೆಲೆಯಲ್ಲಿ ಮಗ ಸಿ.ಎನ್‌.ರಮೇಶ್‌ ಮಾನಸಿಕವಾಗಿ ಕುಗ್ಗಿಹೋಗಿದ್ದರು. ತಾಯಿ ಮೃತರಾದ ಕೆಲವು ಕ್ಷಣಗಳಲ್ಲೇ ಅವರ ನಿವಾಸದಲ್ಲೇ ಹೃದಯಾಘಾತದಿಂದ ರಮೇಶ್‌ ನಿಧನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next