Advertisement

ಸೋಮಯ್ಯಾ ಕಾಲೇಜು ಕನ್ನಡ ವೃಂದ: ವಾರ್ಷಿಕ ವಿಹಾರಕೂಟ

04:57 PM Jul 11, 2018 | Team Udayavani |

ಮುಂಬಯಿ:ನಗರದಲ್ಲಿ ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕನ್ನಡ ಸೇನಾನಿ ಬಿರುದಾಂಕಿತ ದಿ| ಡಾ| ಸಂಜೀವ ಶೆಟ್ಟಿ ಅವರ ನೇತೃತ್ವದಲ್ಲಿ ಬೆಳೆದು ಬಂದ ಸೋಮಯ್ನಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಬಳಗದ ಸೋಮಯ್ನಾ ಕಾಲೇಜು ಕನ್ನಡ ವೃಂದದ ವಾರ್ಷಿಕ ವಿಹಾರಕೂಟವು ಇತ್ತೀಚೆಗೆ 077 ಯುನಿವರ್ಸ್‌ ರೆಸಾರ್ಟ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಬಳಗದ ಮುಖಂಡ ಹೇಮಂತ್‌ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ವಿಹಾರಕೂಟದಲ್ಲಿ ಹೆಚ್ಚಿನ ಸದಸ್ಯ ಬಾಂಧವರು ಪಾಲ್ಗೊಂಡು ವಿವಿಧ ಸಾಂಸ್ಕೃತಿಕ ಮನೋರಂಜನೆಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಕಾಲೇಜಿನ ದಿನಗಳಿಂದ ಈವರೆಗೆ ಅಗಲಿದ ಶಿಕ್ಷಕರು, ಗೆಳೆಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಮ್ಮ ಮನೆ, ಪರಿವಾರ, ಕೆಲಸದ ಒತ್ತಡದ ನಡುವೆಯೂ ಒಂದು ಸಣ್ಣ ವಿರಾಮ ಮಾಡಿಕೊಂಡು ಆ ಹಳೆಯ ನವಿರಾದ ನೆನಪುಗಳನ್ನು ಮೆಲುಕುಹಾಕಿಕೊಂಡ ಬಳಗದ ಸದಸ್ಯರು ಬಳಗದ ಮುಖಾಂತರ ಮುಂದೆ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ಹೇಮಂತ್‌ ಶೆಟ್ಟಿ, ವಿನಯ್‌ ಪೂಜಾರಿ, ಸರೋಜಿನಿ ಕುಂದರ್‌, ವಸಂತಿ ಕುಂದರ್‌ ಇವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next