Advertisement

“ತ್ಯಾಜ್ಯ’ತುರ್ತು ಸಮಸ್ಯೆಯಾದರೆ ಮಾತ್ರ ಪರಿಹಾರ: ಶ್ರೀನಿವಾಸನ್‌

08:40 AM Jul 31, 2017 | Team Udayavani |

ಉಡುಪಿ: ಘನ ಅಥವಾ ದ್ರವ ತ್ಯಾಜ್ಯವನ್ನು ನಾವು ಯಾವತ್ತೂ ತುರ್ತು ಗಂಭೀರ ಸಮಸ್ಯೆಯಾಗಿ ಪರಿಗಣಿಸಿಯೇ ಇಲ್ಲ. ಅದರಿಂದ ಈಗ ಸಮಸ್ಯೆ ಬೃಹದಾಕಾರವಾಗಿ ಬೆಳೆದಿರುವುದು. ಆ್ಯಂಬುಲೆನ್ಸ್‌, ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್‌, ಪೊಲೀಸ್‌ ಸೇವೆಗಳಂತೆ ತ್ಯಾಜ್ಯ ವಿಲೇವಾರಿಯನ್ನು ಸಹ ತುರ್ತಾಗಿ ಪರಿಗಣಿಸಿದರೆ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಇಂಡಿಯನ್‌ ಗ್ರೀನ್‌ ಸರ್ವಿಸ್‌ ವೆಲ್ಲೂರಿನ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸನ್‌ ಹೇಳಿದರು.
ಮಣಿಪಾಲದ ರಜತಾದ್ರಿಯದಲ್ಲಿ, ರವಿವಾರ ಉಡುಪಿ ಜಿಲ್ಲೆಯ ಎಲ್ಲ ಹೊಟೇಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ ಕುರಿತ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.

Advertisement

ತ್ಯಾಜ್ಯವನ್ನು ಎಸೆಯುವುದರಿಂದ ವಿಷಾನಿಲ ಮಿಥೇನ್‌ ಉತ್ಪತ್ತಿಯಾಗಿ ಮನುಷ್ಯ,ಪ್ರಾಣಿ-ಪಕ್ಷಿಗಳಿಗೆ ಮಾರಕವಾಗುತ್ತದೆ. ಈ ಬಗ್ಗೆ ಜನರು ಅರಿತುಕೊಂಡರೆ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಉಡುಪಿಯನ್ನು 2018ರ ಅಕ್ಟೋಬರ್‌ 2ರೊಳಗೆ ಸಂಪೂರ್ಣ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಈಗಾಗಲೇ ಎಲ್ಲ ರೀತಿಯ ಯೋಜನೆ ಸಿದ್ಧವಾಗಿದೆ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಉಪಸ್ಥಿತರಿದ್ದರು. ಶ್ರೀನಿವಾಸ್‌ ರಾವ್‌ ಪ್ರಸ್ತಾ ವನೆಗೈದರು. ಮಹೇಶ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next