Advertisement

ಸೂರ್ಯಗ್ರಹಣ: ಮಣ್ಣಿನಲ್ಲಿ ಬುದ್ದಿಮಾಂದ್ಯನ ಹೂತಿಟ್ಟ ಪಾಲಕರು

09:59 AM Dec 27, 2019 | keerthan |

ವಿಜಯಪುರ: ಅಂಗವೈಕಲ್ಯ ಹೋಗುತ್ತದೆ ಎಂಬ ಮೂಢನಂಬಿಕೆ ಹಿನ್ನೆಲೆಯಲ್ಲಿ ಗ್ರಹಣದ ಸಂದರ್ಭದಲ್ಲಿ ಬುದ್ಧಿಮಾಂದ್ಯತೆ ಇದ್ದ ಯುವಕನನ್ನು ಕುತ್ತಿಗೆವರೆಗೆ ಮಣ್ಣಲ್ಲಿ ಹೂತಿಟ್ಟ ಘಟನೆ ಜಿಲ್ಲೆಯಲ್ಲಿ ಜರುಗಿದೆ.

Advertisement

ಇಂಡಿ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಗುರುವಾರ ಕಂಕಣ ಸೂರ್ಯ ಗ್ರಹಣ ಸಂಭವಿಸಿದ ಸಂದರ್ಭದಲ್ಲಿ ಬೆಳಿಗ್ಗೆ ಬುದ್ಧಿಮಾಂದ್ಯತೆ ಇದ್ದ ಪಾಪು ಕುತ್ಬುದ್ದೀನ್ ಮುಲ್ಲಾ (25) ಎಂಬ ವ್ಯಕ್ತಿಯನ್ನು ಕುತ್ತಿಗೆ‌ಮಟ್ಟದ ವರೆಗೆ ಮಣ್ಣಲ್ಲಿ ಹೂತಿಡಲಾಗಿತ್ತು.

ಈ ಘಟನೆಯನ್ನು ಅನ್ಯರು ನೋಡದಿರಲಿ ಎಂದು ಪ್ಲಾಸ್ಟಿಕ್ ಚೀಲದ ಹೊದಿಕೆ ಸುತ್ತಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next