Advertisement

ರೋಗಿಗಳು ಕಂಗಾಲು; ಆಸ್ಪತ್ರೆಯೊಳಗೆ ಬುಸ್, ಬುಸ್ ನಾಗಪ್ಪ ಪ್ರತ್ಯಕ್ಷ!

12:50 PM Jul 17, 2017 | Sharanya Alva |

ಮೈಸೂರು:ಬರೋಬ್ಬರಿ 60 ಮಂದಿ ರೋಗಿಗಳಿದ್ದ ವಾರ್ಡ್ ನೊಳಗೆ ನಾಗರಹಾವು ಪ್ರತ್ಯಕ್ಷವಾಗಿದ್ದರಿಂದ ರೋಗಿಗಳು ಭಯಭೀತರಾದ ಘಟನೆ ಮೈಸೂರಿನ ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಖಾಸಗಿ ಟಿವಿ ಚಾನೆಲ್ ವೊಂದರ ವರದಿ ತಿಳಿಸಿದೆ.

Advertisement

ಸ್ಯಾನಿಟೋರಿಯಂ ಆಸ್ಪತ್ರೆಯ ಔಷಧ ಇಡುವ ಕಬೋರ್ಡ್ ನೊಳಗೆ ನಾಗರಹಾವು ಸೇರಿಕೊಂಡಿತ್ತು. ಕಬೋರ್ಡ್ ತೆರೆದಾಗ ಹಾವು ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಯ ಸಿಬ್ಬಂದಿಗಳು ಉರಗ ತಜ್ಞರಿಗೆ ವಿಷಯ ಮುಟ್ಟಿಸಿದ್ದರು.
ಏತನ್ಮಧ್ಯೆ ವಾರ್ಡ್ ನಲ್ಲಿದ್ದ 60 ಮಂದಿ ರೋಗಿಗಳು ಕಂಗಾಲಾಗಿದ್ದರು. ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಉರಗ ಸಂರಕ್ಷಕ ಸ್ನೇಕ್ ರಮೇಶ್ ಅವರು ಹಾವನ್ನು ಹಿಡಿದು ತೆಗೆದುಕೊಂಡು ಹೋದ ಮೇಲೆ ರೋಗಿಗಳು, ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next