Advertisement

ರಾಹುಲ್‌ ರಾಮನಾಮ ಜಪ ಬಿಜೆಪಿಯ ವಿಜಯ: ಸ್ಮ್ರತಿ ಇರಾನಿ

07:22 PM Oct 06, 2018 | udayavani editorial |

ಹೊಸದಿಲ್ಲಿ : ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಮ ನಾಮ ಜಪಿಸುವುದು ಮತ್ತು ಆರತಿ ಎತ್ತುವುದು ಭಾರತೀಯ ಜನತಾ ಪಕ್ಷದ ವಿಜಯವಾಗಿದೆ’ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮತಿ ಇರಾನಿ ಹೇಳಿದ್ದಾರೆ. 

Advertisement

ವಿಧಾನಸಭಾ ಚುನಾವಣೆಯೆಡೆಗೆ ಮುಖಮಾಡಿರುವ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನರ್ಮದಾ ಪೂಜೆಯ ವೇಳೆ ಆರತಿ ಎತ್ತಿರುವುದನ್ನು ವ್ಯಂಗ್ಯದಿಂದ ಟೀಕಿಸಿರುವ ಇರಾನಿ, “ರಾಹುಲ್‌ ಗಾಂಧಿ ಅವರು ರಾಜಕೀಯ ಮೋಕ್ಷಕ್ಕಾಗಿ ದೇವಸ್ಥಾನಗಳಿಗೆ ಭೇಟಿ ನೀಡಬೇಕಾಗಿದೆ’ ಎಂದು ಹೇಳಿದರು. 

ಹಿಂದೂ ಭಯೋತ್ಪಾದನೆ ವಿಷಯವನ್ನು ಕೆದಕಿ ಮಾತನಾಡಿದ ಇರಾನಿ, “ರಾಹುಲ್‌ ಗಾಂಧಿಗೆ ಹಿಂದೂ ಭಯೋತ್ಪಾದನೆಯ ಭಯ ಇದೆ; ಏಕೆಂದರೆ ಅವರು ಕೋರ್ಟಿಗೆ ರಾಮ ಎಂದೂ ಇರಲಿಲ್ಲ ಎಂದು ಅಫಿದಾವಿತ್‌ ಬರೆದುಕೊಟ್ಟಿರುತ್ತಾರೆ. ಇವತ್ತು ಅದೇ ರಾಹುಲ್‌ ಗಾಂಧಿ ರಾಮ ನಾಮ ಜಪಿಸುತ್ತಿದ್ದಾರೆ ಮತ್ತು ಆರತಿ ಎತ್ತುತ್ತಿದ್ದಾರೆ. ಇದು ನಿಜಕ್ಕೂ ಬಿಜೆಪಿಯ ವಿಜಯವೇ ಆಗಿದೆ’  ಎಂದು ಹೇಳಿದರು. 

ರಾಹುಲ್‌ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಜನರಿಗೆ ಕಣ್ಣು ಹೊಡೆಯುವ ಮತ್ತು ಬಹುಸಂಖ್ಯಾಕ ಸಮುದಾಯದವರ ವೋಟ್‌ ಬ್ಯಾಂಕ್‌ ಗುರಿ ಇರಿಸುವ ಹುನ್ನಾರವಾಗಿದೆ; ಅರ್ಧ ಬೆಂದ ಸತ್ಯಗಳು ಮತ್ತು ಸುಳ್ಳುಗಳಿಗಾಗಿ ರಾಹುಲ್‌ ಗಾಂಧಿ ಅವರಿಂದು  ರಾಜಕೀಯ ಮೋಕ್ಷ ಪಡೆಯಲು ದೇವಸ್ಥಾನಗಳಿಗೆ ಭೇಟಿ ನೀಡಬೇಕಾಗಿದೆ ಎಂದು ಇರಾನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next