Advertisement

ಕಾಮ್‌ಧಾರ್‌ ಗೆಲ್ಲಬೇಕು, ನಾಮ್‌ಧಾರ್‌ ಸೋಲಬೇಕು

12:50 AM Apr 01, 2019 | Team Udayavani |

ಮಡಿಕೇರಿ: ಈ ಲೋಕಸಭಾ ಚುನಾವಣೆ ಕೇವಲ ಮೋದಿಯವರ ಚುನಾವಣೆಯಲ್ಲ. ಇದು ಪ್ರತಿಯೋರ್ವ ಭಾರತೀಯರ ಗೌರವ, ಸಮ್ಮಾನದ ಚುನಾವಣೆಯಾಗಿದೆ. ಭ್ರಷ್ಟಾಚಾರದ ವಿರುದಟಛಿದ
ಹೋರಾಟಕ್ಕೆ ಇಡೀ ದೇಶದ ಬೆಂಬಲ ಅಗತ್ಯವಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಪಾದಿಸಿದ್ದಾರೆ. ಗೋಣಿಕೊಪ್ಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಭ್ರಷ್ಟಾಚಾರದಲ್ಲಿಯೇ ಮುಳುಗೆದ್ದಿರುವ ಕಾಂಗ್ರೆಸ್‌ ಮುಖಂಡರು ಜಾಮೀನು ಪಡೆದುಕೊಂಡು ಆತಂಕದ ಜೀವನ ನಡೆಸುತ್ತಿದ್ದಾರೆ. ಭ್ರಷ್ಟರಿಗೆ ಮೋದಿ ಭಯ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು. ತೆರಿಗೆ ವಂಚಿಸಿದವರ ಮೇಲೆ ಐಟಿ ದಾಳಿಯಾದರೆ ಈ ರಾಜ್ಯದ ಮುಖ್ಯಮಂತ್ರಿ ಯಾಕೆ ಕಣ್ಣೀರು ಹಾಕಬೇಕು ಎಂದು ಪ್ರಶ್ನಿಸಿದರು. ಈ ಚುನಾವಣೆ ಮೂಲಕ ಕಾಮ್‌ಧಾರ್‌ಗಳು ಗೆಲ್ಲಬೇಕು, ನಾಮ್‌ಧಾರ್‌ ಗಳು ಸೋಲುವಂತಾಗಬೇಕು ಎಂದರು.

ವಿದೇಶ ಸುತ್ತುತ್ತಿದ್ದವರಿಗೆ ಏಕಾಏಕಿ ಅಯೋಧ್ಯೆ, ಗಂಗಾ ನದಿ ನೆನಪಾಗಬೇಕಾದರೆ ಮೋದಿಯವರೇ ಕಾರಣ ಎಂದು ವ್ಯಂಗ್ಯವಾಡಿದರು. ಅಯೋಧ್ಯೆಯ ಶ್ರೀರಾಮ ದೇವಾಲಯಕ್ಕೆ ತೆರಳಿದ ಸಂದರ್ಭ ತಮ್ಮ ಮತ ಬ್ಯಾಂಕ್‌ ನೆನಪಾಗಿ ದೇವರ ಮುಂದೆತಲೆಬಾ ಗಲು ತಿಣಕಾಡುವವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next