Advertisement

  ಪ್ರಾರಬ್ದಗಳನ್ನು ನಿರಾಳವಾಗಿ ನಿವಾರಿಸಿಕೊಳ್ಳುವುದು ಹೇಗೆ?

12:06 PM Feb 24, 2018 | |

ಶಿವ ಸಹಸ್ರ ನಾಮಾವಳಿ, ವಿಷ್ಣು ಸಹಸ್ರನಾಮಾವಳಿ, ಶ್ರೀ ಲಲಿತಾ ಸಹಸ್ರ, ನಾಮಾವಳಿಗಳಲ್ಲಿ ಯಾವುದಾದರೊಂದನ್ನು ಪ್ರತಿ ದಿನ ಎರಡು ಬಾರಿ ಓದಿದರೆ ಬದುಕಿನ ಕೊಳೆ ಕಳೆದು ಒಳಿತುಗಳನ್ನು ಹಿಡಿದಿಡಲು ಸಾಧ್ಯ. 

Advertisement

   ಜಾತಕ ಕುಂಡಲಿಯಲ್ಲಿನ ಒಂದು ಸಣ್ಣ ದೋಷವು ಹೇಗೆಲ್ಲ, ಎಂಥೆಂಥ ಅವಾಂತರಗಳನ್ನು ಸೃಷ್ಟಿಸಬಲ್ಲದು ಎಂಬುದು ನಿಮಗೂ ತಿಳಿದಿದೆ. ವ್ಯಕ್ತಿತ್ವ ಶುದ್ಧಿ, ಮಾತು, ಧೈರ್ಯ, ಹಾಸಿಗೆ ಇದ್ದಷ್ಟೇ ಕಾಲು ಚಾಚುವ, ಸಂಸ್ಕಾರಪೂರ್ಣತೆಯೊಂದಿಗೆ ತುಂಬಿದ ಕೊಡವಾಗುವ, ಶತ್ರುಗಳನ್ನು, ವ್ಯಾಧಿಗಳನ್ನು, ಅರಿಷ್ಟಗಳನ್ನು, ಗಾಂಭೀರ್ಯ ಹಾಗೂ ಬುದ್ಧಿ ಶಕ್ತಿಯಿಂದ ನಿವಾರಿಸಿಕೊಳ್ಳುವ, ವೈವಾಹಿಕ ಜೀವನದ ಮಹತ್ವವನ್ನು ಅರಗಿಸಿಕೊಳ್ಳುವ, ಮರಣವನ್ನು, ಧರ್ಮಾರ್ಥ ಕಾಮ ಮೋಕ್ಷಗಳ ಅರ್ಥಪೂರ್ಣ ಆವರಣಗಳನ್ನು ಬಳಸಿಕೊಂಡು (ದೀರ್ಘಾಯುವಾಗುವ ಹಾಗೆ ಪರಿವರ್ತಿಸಿಕೊಳ್ಳುವ) ಗೆಲ್ಲುವ ವಿಚಾರವನ್ನು ಈ ಮೊದಲು ಚರ್ಚಿಸಲಾಗಿತ್ತು. 

   ಈವಾರ ಜಾತಕ ಕುಂಡಲಿಯ ಒಂಭತ್ತನೇ ಮನೆಯನ್ನು ವಿಶ್ಲೇಷಿಸಿ, ಇದರ ಇತಿಮಿತಿಗಳೊಂದಿಗೆ ಪ್ರಾರಬ್ಧಗಳನ್ನು ಮೆಟ್ಟಿನಿಲ್ಲುವ ಅಂಶಗಳನ್ನು ರೂಢಿಸಿಕೊಳ್ಳುವುದು ಹೇಗೆಂಬುದನ್ನು ನೋಡೋಣ. ಒಂಭತ್ತನೇ ಮನೆ ವ್ಯಕ್ತಿಯ ತಂದೆಯನ್ನು, ಭಾಗ್ಯವನ್ನು, ಅಡಕಗೊಂಡಿರುವ ಪ್ರತಿಭೆಗಳ ಮೂಲಕ ನಮ್ಮನ್ನು ನಾವು ಒಂದು ಶಿಸ್ತಿಗೆ, ಜನರ ಲಕ್ಷ್ಯಕ್ಕೆ ಹೇಗೆ ಕೇಂದ್ರ ಬಿಂದುವನ್ನಾಗಿಸಿಕೊಳ್ಳಬಹುದು ಎಂಬುದನ್ನು ತಿಳಿಯಬೇಕು. ಶಿವ ಸಹಸ್ರ ನಾಮಾವಳಿ, ವಿಷ್ಣು ಸಹಸ್ರನಾಮಾವಳಿ, ಶ್ರೀ ಲಲಿತಾ ಸಹಸ್ರ, ನಾಮಾವಳಿಗಳಲ್ಲಿ ಯಾವುದಾದರೊಂದನ್ನು ಪ್ರತಿ ದಿನ ಎರಡು ಬಾರಿ (ಕಟ್ಟ ಕಡೆಗೆ ಒಂದು ಬಾರಿಯಾದರೂ) ಓದಿದರೆ ಬದುಕಿನ ಕೊಳೆ ಕಳೆದು ಒಳಿತುಗಳನ್ನು ಹಿಡಿದಿಡಲು ಸಾಧ್ಯ. 

 ಭಾಗ್ಯಸ್ಥಾನ (ಕುಂಡಲಿಯ 9ನೇ ಮನೆ)
  ಬಹಳಷ್ಟು ಮುಖ್ಯವಾದುದನ್ನು ಬದುಕಿಗೆ ಒದಗಿಸಿಕೊಡುವ ಮನೆಯಾಗಿದೆ ಇದು. ನೆಹರು ಅವರ ಬದುಕಿನಲ್ಲಿ ಅತ್ಯಂತ ಸೂಕ್ಷ್ಮಶಕ್ತಿಯನ್ನು ಸಂಪಾದಿಸಿಕೊಂಡ ಭಾಗ್ಯದ ಮನೆ, ಭಾಗ್ಯ ಅಧಿಪತಿ, ಕರ್ಮಸ್ಥಳ ( ಕೆಲಸ ಮಾಡುವ ಸ್ಥಳ)ಸ್ವಾತಂತ್ರ  ಹೋರಾಟಗಾರನಾಗಿ ಜೈಲುವಾಸ ಒದಗಿಸಿಯೂ ಗುರು ಗ್ರಹ ಭಾಗ್ಯವನ್ನು ಇವರ ಕರ್ಮಸ್ಥಾನಕ್ಕೆ ಅದ್ಬುತ ಚೈತನ್ಯ ಒದಗಿಸಿ, ವಿರೋಧಿಗಳನ್ನು ದಮನ ಮಾಡಿ, ಗಾಢ್‌ಫಾದರ್‌ ಶಕ್ತಿ, ತಂದೆಯ ಪ್ರಭಾವ, ಸ್ವಸಾಮರ್ಥಯಗಳನ್ನೆಲ್ಲ ಒಗ್ಗೂಡಿಸಿಕೊಟ್ಟು ಅತ್ಯಂತ ಶಕ್ತಿಶಾಲಿಯಾಗಿ ರೂಪಿಸಿತು. ಎಲ್ಲರ ಜಾತಕದಲ್ಲಿ ಇರುವುದು ಕೇವಲ ಒಂಭತ್ತೇ ಗ್ರಹಗಳಾದರೂ, 12 ಮನೆಗಳಾದರೂ, ಒಬ್ಬ ವ್ಯಕ್ತಿಗಿಂತ ಇನ್ನೊಬ್ಬ ವ್ಯಕ್ತಿಯ ಗ್ರಹಚಾರಗಳನ್ನೆಲ್ಲ ವಿಧವಿಧವಾಗಿ ಬದಲಾವಣೆಗೊಳಿಸುತ್ತದೆ. ಶನೈಶ್ಚರ ಸುಖವನ್ನು ಹಾಳು ಮಾಡಿದರೂ ಯೋಗಕಾರಕ ಕುಜ ಭಾಗ್ಯವನ್ನು ದೃಢಗೊಳಿಸುತ್ತದೆ. ಶನೈಶ್ಚರ ಸುಖವನ್ನು ಹಾಳು ಮಾಡಿದರೂ ಯೋಗಕಾರಕ ಕುಜ ಭಾಗ್ಯವನ್ನು ದೃಢಗೊಳಿಸಿದ ವಿಧಾನ ಅದ್ಬುತ. ಪ್ರಧಾನಿಯಾಗಿಯೂ ಜವಾಹರಲಾಲ್‌ ತನ್ನನ್ನು ತಾನು ವಿಮರ್ಶಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದು ನೂರಾರು ಬಾರಿ. ಯಾಕೆಂದರೆ ಸುಖವಿರದಿದ್ದರೂ ತನ್ನ ಭಾಗ್ಯದ ಮೂಲಕವಾಗಿ ದಕ್ಕಿದ ಎತ್ತರದಿಂದ ವಿಜೃಂಭಿಸಿಕೊಂಡವರು ಇವರು. ವಾಗ್ಮಿ ಹೌದು. ಆದರೂ ಶಬ್ದಗಳಿಗಾಗಿ ಪರದಾಡುತ್ತಿದ್ದರು. ಸಂವಿಧಾನದ ರಚನೆ, ದೇಶದ ವಿಭಜನೆ ಸಂದರ್ಭದಲ್ಲಿ, ಮಹಾತ್ಮರ ಕಗ್ಗೊàಲೆಯ ಸಂದರ್ಭದಲ್ಲಿ, ಚೀನ ವಿರುದ್ಧ ಹೀನಾಯವಾಗಿ ಸೋತಾಗ, ಕೇರಳದಲ್ಲಿ ನಂಬೂದರಿ ಪಾದ್‌ ಸಂಕಾರ ಉರುಳಿದಾಗ, ಬದುಕಿನಲ್ಲಿ ಸಿಗಬೇಕಾದದ್ದು ಎಲ್ಲೋ ಹೊರ ಆವರಣದಲ್ಲಿ ಒದಗಿಸಿಕೊಳ್ಳಬೇಕಾಗಿ ಬಂದಾಗ ನೆಹರು ಅವರಿಗೆ ಸುಖ ಇರಲು ಸಾಧ್ಯವೇ? ಆದರೂ ವ್ಯಕ್ತಿತ್ವದ ಬಹು ದೊಡ್ಡ ತೂಕವನ್ನು ನಿಭಾಯಿಸಿಕೊಂಡದ್ದು ಚಂದ್ರನಿಂದ ಮತ್ತು ಭಾಗ್ಯವನ್ನು ಎತ್ತಿ ಹಿಡಿದ ಕುಜನಿಂದ, ಎದುರಾಳಿಗಳನ್ನು ಕುಬjಗೊಳಿಸಲು ನೆರವಿಗೆ ಬಂದ ಗುರುವಿನಿಂದ ಮಾನಸಿಕವಾಗಿ ನರಳಿದ್ದು ಸತ್ಯ. ಆದರೆ ವ್ಯಕ್ತಿತ್ವವನ್ನು ಸಂರಕ್ಷಿಸಿಕೊಳ್ಳಲು ಮಾನಸಿಕವಾಗಿ ದಾಢìÂತೆ ಇತ್ತು. ಮಾತಿನ ಚಾಕಚಕ್ಯತೆ ( ಶಬ್ದಗಳಿಗಾಗಿ ಶನೈಶ್ಚರ ಪರದಾಡಿಸಿದರೂ) ಬುದ್ಧಿಯನ್ನು ಸಂವೇದಿಸುವ ಆತ್ಮಕಾರಕ ಸೂರ್ಯನಿಂದಾಗಿ ಧೀ ಶಕ್ತಿಯಲ್ಲಿ ಸಂಪನ್ನತೆ ಪಡೆದಿದ್ದರು. ಭಾರತದ ಚರಿತ್ರೆಯಲ್ಲಿ ನೆಹರೂರನ್ನು ಪ್ರಧಾನವಾಗಿ ಪರಿಗಣಿಸಲೇಬೇಕು. 

 ನೆಹರು ಅವರನ್ನು ಬಿಟ್ಟು ಚರಿತ್ರೆ ಬರೆಯಲಾಗದು. ಅವರ ಶಕ್ತಿ ಹಾಗೂ ಮಿತಿ ಅವರನ್ನು ಒಬ್ಬ ಅದ್ಬುತ ವ್ಯಕ್ತಿಯನ್ನಾಗಿ ಪರಿವರ್ತಿಸಿದೆ. ಅಂತ್ಯದ ದಿನಗಳಲ್ಲಿ ರಾಹುದಶಾಕಾಲ ಅವರನ್ನು ತಂಬಾ ಪೀಡಿಸಿತು. ಕುಟುಂಬದಲ್ಲಿ ಅಶಾಂತಿ ಇತ್ತು. ಶನೈಶ್ಚರನ ಪೀಡೆ ( ಅಷ್ಟಮ ಶನಿಕಾಟ) ಮರಣಕ್ಕಾಗಿನ ವೇದಿಕೆ ನಿರ್ಮಿಸಿತ್ತು. 

Advertisement

  ಭಾಗ್ಯಸ್ಥಾನ ದುರ್ಬಲವಾಗಿದ್ದರೆ ಪರಿಹಾರಗಳೇನು?
 ನೀವು ನಂಬುವುದಾದರೆ ನಂಬಿ. ಬಿಡುವುದಾದರೆ ಬಿಡಿ. ಇತ್ತೀಚೆಗೆ ನಿಧನರಾದ ಜಯಲಲಿತಾರ ಜನ್ಮ ಕುಂಡಲಿಯಲ್ಲಿ ಭಾಗ್ಯಸ್ಥಾನ ದುರ್ಬಲ. ಆದರೆ ಅವರು ಅದ್ಬುತವಾಗಿ ಮಾತನಾಡುವ ಶಕ್ತಿ ಪಡೆದಿದ್ದರು. ಕೋಪ ಬಂದರೆ ಅದನ್ನು ಪ್ರಕಟಿಸಲೂ ಹಂಜರಿಯುತ್ತಿರಲಿಲ್ಲ. ಅವರ ತೂಕ ತಪ್ಪಿದಂತೆ ಕಂಡರೂ ಶಕ್ತಿಯನ್ನು ತಪ್ಪಿದ ತೂಕದಿಂದಲೇ ಸಂಪಾದಿಸಿಕೊಳ್ಳುವ ಚೈತನ್ಯ ಪಡೆದಿದ್ದರು. ಜಾತಕದಲ್ಲಿ, ಸಂಖ್ಯಾಶಾಸ್ತ್ರದಲ್ಲಿ ಅವರಿಗೆ ತುಂಬಾ ನಂಬಿಕೆ ಇತ್ತು. ಇಷ್ಟದೇವತೆಯನ್ನು ಆರಾಧಿಸುತ್ತಿದ್ದರು. ಭಯವಿದ್ದರೂ ತೋರ್ಪಡಿಸದೆಯೇ ನಿಯಂತ್ರಿಸುತ್ತಿದ್ದರು. ಚಂದ್ರನ ಕಾರಣದಿಂದ ಧೈರ್ಯವಂತೆಯಾಗಿ ಕಾಣಿಸಿದರು. ಅವರಿಗೆ ಗೊತ್ತಿತ್ತು…., ತನ್ನ ನಂಬಿಗಸ್ಥ ಕೈ ಕೆಳಗಿನವರನ್ನು ನಿಭಾಯಿಸುವ ಜಾಣ್ಮೆ ಹೇಗೆ ಇರಬೇಕು ಎಂಬು ಚಾತುರ್ಯ. ಅವರ ವಿಧಿ ಅವರನ್ನು ಮೇಲೆಬ್ಬಿಸಿದ್ದೇ ಕೈಕೆಳಗಿನವರಿಂದ. ಆದರೆ ನಂಬಿಗಸ್ಥ ಕೈಕೆಳಗಿನವರು ಜಯಲಲಿತಾರನ್ನು ಉತ್ಸವ ಮೂರ್ತಿಯಾಗಿ ಕೂರಿಸಿದ್ದು ಈಗ ಗುಟ್ಟೇನಲ್ಲ. ಅವರ ಜಾತಕದಲ್ಲಿನ ಬಂಧನ ಯೋಗ ಇಡೀ ಜೀವನಕ್ಕೆ ಸಂಬಂಧಿಸಿದ ಅಡೆತಡೆ. ಆದರೆ ಬೌದ್ಧಿಕ ಶಕ್ತಿ ವಿಷವನ್ನೂ ನೀಲಕಂಠನಂತೆ ನುಂಗುವ ಚಾಕಚಕ್ಯತೆ ಒದಗಿಸಿತ್ತು. ಆದರೂ ಎದುರಿಸಿದ ಅಡೆತಡೆ, ಅವಮಾನ, ಅಸಹಾಯಕತೆ, ತಿಳಿದೂ ತಿಳಿದೂ ತಪ್ಪು ಮಾಡಿ (ಮೇಲೇರಿಸಿದವರೇ ಒತ್ತಡ ತಂದು ಜಯಾರನ್ನು ಸಂಕಟಕ್ಕೆ ಸಿಲುಕಿಸಿದ ಬಗೆ ಹೇಗೆಲ್ಲ ಇತ್ತು ಎಂಬುದನ್ನು ನಾವು ತಿಳಿದಿದ್ದೇವೆ.ಶಶಿ ಮಂಗಳ ಯೋಗ ಅಪಾರವಾದ ಸಂಪತ್ತನ್ನು, ಕಷ್ಟಗಳನ್ನೂ ಒದಗಿಸಿತು. ಅಪಾರವಾದ ಧೈರ್ಯವನ್ನು ಒದಗಿಸಿ ಅತಿಯಾದ ಆತ್ಮವಿಶ್ವಾಸ ಒದಗಿಸಿ ಪರದಾಡಿಸಿತು. ಆದರೆ ಜಯಲಲಿತಾ ಅಸ್ವಿತ್ವಕ್ಕಾಗಿನ ಪರದಾಟ, ವ್ಯಾಜ್ಯ, ಸವಾಲು, ಪ್ರತಿ ಸವಾಲು, ಛಲ, ಹಟದಿಂದ ಕಾರ್ಯ ಸಾಧಿಸುವ ಮನೋಭಾವ ಇತ್ಯಾದಿಗಳಿಂದ ದುರ್ಬಲವಾದ ಭಾಗ್ಯವನ್ನು ಗಟ್ಟಿಯಾಗಿಸಿಕೊಂಡು ತಾವು ನಡೆದದ್ದೇ ಸಾಫ‌ಲ್ಯದ ದಾರಿ ಎಂದು ನಿರೂಪಿಸಿದರು. 

 ಭಾಗ್ಯಸ್ಥಾನ ಮತ್ತು ಬದುಕಿನ ಇತರ ವಿಚಾರಗಳು
 ಅಲೌಕಿಕವಾದ ಬಗೆಗಿನ, ಧಾರ್ಮಿಕ ಮನೋಭಾವ, ಪರರ ದುಃಖಕ್ಕೆ ಸಂದಿಸುವ ಮನೋಭಾವ, ಪಿತೃ ಸಂಬಂಧವಾದ ಪ್ರಾಪ್ತಿ, ತಂದೆಯಿಂದ ಒದಗುವ ಶಕ್ತಿ, ಪ್ರತಿಭೆ ಹಾಗೂ ಸಂಸ್ಕಾರಗಳು ಭಾಗ್ಯಸ್ಥಾನದಿಂದ ಸ್ಪಷ್ಟ. ತಂದೆಯು ಬಡವನೇ ಆಗಿದ್ದರೂ ತಂದೆ ಒದಗಿಸಿದ ಸಂಸ್ಕಾರ, ವಿದ್ಯೆ,ವಿನಯ, ಬುದ್ಧಿ ಬಲಗಳು ಬದುಕನ್ನು ಗೆಲ್ಲುವ ದಿಕ್ಕಿಗೆ ಹೊರಳಿಸಬಹುದು. ಬಿಲ್‌ಗೇಟ್ಸ್‌ ಬಾಲ್ಯ ಅತ್ಯಂತ ಸಾಮಾನ್ಯ ಸ್ತರದಿಂದ ಮೇಲೆದ್ದು ಬಂದಿದ್ದು. ಆದರೆ ಅವರ ಜಾತಕದ ಚಂದ್ರನಿಂದ ಭಾಗ್ಯವನ್ನು ಗಟ್ಟಿಯಾಗಿಸಿಕೊಂಡರು. ಕೊಡುಗೈ ದೊರೆಯಾದ ಮೇಲೂ, ಜಗತ್ತಿನ ಅತ್ಯಂತ ಶ್ರೀಮಂತನಾದಾಗಲೂ ಅವರ ಕಾಲ್ಗಳು ನೆಲದ ಮೇಲೇ ಇದ್ದವು. ಶುಕ್ರ ದಶಾ ಬರುವ ಹೊತ್ತಿಗೆ ಪ್ರಪಂಚದ ವ್ಯಾಖ್ಯೆಯನ್ನು ಮೈಕ್ರೋಸಾಫ್ಟ್ ಕಂಪೆನಿಯ ಸ್ಥಾಪನೆಯಿಂದಾಗಿ ಒದಗಿದ ಸಾಫ‌ಲ್ಯತೆಯಿಂದ ಬದಲಿಸಿದ ಖ್ಯಾತಿ ಇವರದು. ಬದುಕಿನಲ್ಲಿ ಹಾಗಾದರೆ ಹಣವೋ, ಸುಖವೋ, ಭಾಗ್ಯವೋ, ಬಂಧು ಬಾಂಧವರೋ ಗೆಳೆಯರೋ, ಸಹೋದ್ಯೋಗಿಗಳ್ಳೋ ಯಾರು, ಯಾವಾಗ, ಏಕೆ, ಎಷ್ಟು ಮುಖ್ಯ ಎಂದು ತಿಳಿಯಲಾಗದು. ಹೆಂಡತಿ ಮತ್ತು ಮಕ್ಕಳು ಕೈಗೆ ಸಿಗುವ ಆರೋಗ್ಯಕರ ಬೆಳವಣಿಗೆ ದೈವಾನುಗ್ರಹದ ಶಕ್ತಿಯಿಂದ ಇವೆಲ್ಲ. ಭಾಗ್ಯ ಸ್ಥಾನದಿಂದ ಲಭ್ಯ. 

ಅನಂತಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next