Advertisement

ಹುಬ್ಬಳ್ಳಿ: ಬಡಾವಣೆ ಬವಣೆ

06:19 PM Jul 09, 2021 | Team Udayavani |

ವರದಿ : ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಅವಳಿನಗರದಲ್ಲಿನ ಅಕ್ರಮ-ಅನಧಿಕೃತ ಲೇಔಟ್‌ಗಳ ಸಕ್ರಮಕ್ಕೆ 6 ತಿಂಗಳ ಕಾಲಾವಕಾಶ ನೀಡಲು ನಿರ್ಧರಿಸಲಾಗಿದ್ದು,ಅದಕ್ಕೂ ಸ್ಪಂದಿಸದಿದ್ದರೆ ಲೇಔಟ್‌ಗಳವರ ವಿರುದ್ಧ ಎಫ್‌ ಐಆರ್‌ ದಾಖಲು ಮಾಡುವ ನಿಟ್ಟಿನಲ್ಲಿ ಹುಡಾ ಗಂಭೀರ ಚಿಂತನೆ ನಡೆಸಿದೆ.

ಅನಧಿಕೃತ-ಅಕ್ರಮ ಲೇಔಟ್‌ಗಳು ಮಹಾನಗರದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಭವಿಷ್ಯದಲ್ಲೂ ಅನೇಕ ತೊಂದರೆಗಳನ್ನು ಉಂಟು ಮಾಡಲಿವೆ ಎಂಬ ಉದ್ದೇಶದಿಂದ ಕಳೆದ ಹಲವಾರು ವರ್ಷಗಳಿಂದ ಅಕ್ರಮ-ಅನಧಿಕೃತ ಬಡಾವಣೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಮಾತು ಕೇಳಿ ಬರುತ್ತಿದೆ. ಕೆಲವೊಂದು ಬಡಾವಣೆಗಳಲ್ಲಿ ತೆರವು ಕಾರ್ಯಾಚರಣೆಯೂ ನಡೆದಿದೆ. ಆದರೂ ಅಕ್ರಮ-ಅನಧಿಕೃತ ಬಡಾವಣೆಗಳು ತಲೆ ಎತ್ತುವುದು ಮಾತ್ರ ನಿಂತಿಲ್ಲ. ಅದೆಷ್ಟೋ ಕಡೆ ಕೇವಲ 10, 20 ರೂ. ಬಾಂಡ್‌ ಪೇಪರ್‌ ಮೇಲೆ ಬರೆದುಕೊಟ್ಟು, ಲೇಔಟ್‌ನ ಕನಿಷ್ಟ ನಿಯಮ ಪಾಲನೆ ಇಲ್ಲದೆಯೇ ನಿವೇಶನಗಳನ್ನು ಮಾರಾಟ ಮಾಡಿದ್ದಿದೆ.

ಇದೇ ರೀತಿ ಬಾಂಡ್‌ಗಳ ಮೇಲೆ ಬರೆದುಕೊಟ್ಟು ನಿವೇಶನ ಮಾರಾಟ ಮಾಡಿದ್ದು ಯಾರೋ, ನಿವೇಶನ ಖರೀದಿಸಿ ಮನೆ ನಿರ್ಮಾಣ ಮಾಡಿದ ಅನೇಕ ವರ್ಷಗಳ ನಂತರದಲ್ಲಿ ಜಾಗದ ಮಾಲೀಕರು ಇದು ತಮ್ಮ ಜಾಗವೆಂದು ಕಾನೂನು ಮೂಲಕ ಆದೇಶ ತಂದು ಸಾಲ ಮಾಡಿ ಕಟ್ಟಿದ ಮನೆಗಳನ್ನು ತೆರವುಗೊಳಿಸಿದ್ದು ಇದೆ!

ಅಧಿಕ ಲಾಭದಾಸೆಗೆ ನಿಯಮಗಳು ಗಾಳಿಗೆ

Advertisement

ಬಡಾವಣೆ ನಿರ್ಮಾಣ ಮಾಡುವವರ ಲಾಭದಾಸೆಗೆ ಅಕ್ರಮ-ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಿವೆ. ಒಂದು ಬಡಾವಣೆಗೆ ನಿಯಮದಂತೆ ಬಿಡಬೇಕಾದ ಸಾರ್ವಜನಿಕ ಬಳಕೆ ಇನ್ನಿತರ ಜಾಗಗಳನ್ನು ಬಿಡದೆ ಆ ಜಾಗಗಳನ್ನು ಸಹ ನಿವೇಶನಗಳಾಗಿಸಿ ಮಾರಾಟ ಮಾಡಿದರೆ ಹೆಚ್ಚಿನ ಹಣ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಕೆಲವರು ಇಂತಹ ಕಾರ್ಯಕ್ಕೆ ಮುಂದಾಗುತ್ತಾರೆ.

ಲೇಔಟ್‌ ನಿರ್ಮಾಣ ಮಾಡಿದವರು ನಿವೇಶನಗಳನ್ನು ಮಾರಾಟ ಮಾಡಿ ತಮ್ಮ ವ್ಯವಹಾರ ಮುಗಿಯಿತು ಎಂದು ಜಾಗ ಖಾಲಿ ಮಾಡುತ್ತಾರೆ. ನಂತರ ಫಜೀತಿ ಪಡುವವರು ಮಾತ್ರ ವಾಸಿಸುವ ನಿವಾಸಿಗಳು. ಅಕ್ರಮ-ಅನಧಿಕೃತ ಬಡಾವಣೆಗಳು ಬೆಳೆದಂತೆ ಅವುಗಳಿಗೆ ಮೂಲಸೌಕರ್ಯ ಒದಗಿಸುವುದು ಸಮಸ್ಯೆಯಾದರೆ, ನಿಯಮಗಳ ಪಾಲನೆ ಇಲ್ಲದೆಯೇ ಬಡಾವಣೆಗಳು ಬೆಳೆಯುತ್ತವೆ ಎಂಬುದು ಮತ್ತೂಂದು ಸಮಸ್ಯೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next