Advertisement

Hassan; ಬಿ.ಶಿವರಾಮು ವಿರುದ್ದ ಹೈಕಮಾಂಡ್ ಗೆ ಶಿವಲಿಂಗೇಗೌಡ ದೂರು

03:23 PM Jan 20, 2024 | Team Udayavani |

ಹಾಸನ: ಮಾಜಿ ಸಚಿವ ಬಿ.ಶಿವರಾಮು ವಿರುದ್ಧ ಕಾಂಗ್ರೆಸ್ ಹೈ ಕಮಾಂಡ್ ಗೆ ದೂರು ನೀಡಲು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ನಿರ್ಧಾರ.

Advertisement

ಬೇರೆ ಪಕ್ಷಗಳಿಂದ ವಲಸೆ ಬಂದ ನೀತಿಗೆಟ್ಟವರಿಂದ ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಅನ್ಯಾಯವಾಗುತ್ತಿದೆ ಎಂದು ಶಿವರಾಮು ಹೇಳಿರುವುದು ನಮಗೆ ನೋವಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾನೂ ಸೇರಿ ಬೇರೆ ಪಕ್ಷಗಳಿಂದ ಬಂದವರಿಂದಲೇ ಕಾಂಗ್ರೆಸ್ ಗೆ ಇಮೇಜ್ ಬಂದು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಶಿವಲಿಂಗೇಗೌಡ ಹೇಳಿದರು.

ನಾನು ಯಾವ ಕಾರಣಕ್ಕೂ ಲೋಕಸಭಾ ಚುನಾವಣೆಗೆ ನಿಲ್ಲಲ್ಲ. ಅವಿರೋಧವಾಗಿ ಆಯ್ಕೆ ಮಾಡಿದರೂ ಲೋಕಸಭೆಗೆ ನಾನು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next