Advertisement

Sirsi: ಗುಂಡಿಗದ್ದೆ ಬಳಿ ರಸ್ತೆ ದಾಟಿದ ಚಿರತೆ! : ಸ್ಥಳೀಯರಲ್ಲಿ ಆತಂಕ

12:57 PM Sep 04, 2024 | Team Udayavani |

ಶಿರಸಿ: ತಾಲೂಕಿನ ಭೈರುಂಬೆ ಗ್ರಾ.ಪಂ. ವ್ಯಾಪ್ತಿಯ ಹುಳಗೋಳ ಗುಂಡಿಗದ್ದೆ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ.

Advertisement

ಸೆ.3ರ ಮಂಗಳವಾರ ರಾತ್ರಿ 10.45ರ ಸುಮಾರಿಗೆ ಚಿರತೆ ಗುಂಡಿಗದ್ದೆ ಬಳಿ ಶಿರಸಿ ಯಲ್ಲಾಪುರ ರಸ್ತೆ ದಾಟಿದ್ದು, ಇದರ ದೃಶ್ಯವನ್ನು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಸೆರೆ ಹಿಡಿದು ಮಾಹಿತಿ ನೀಡಿದ್ದಾರೆ.

ಸದೃಢವಾಗಿದ್ದ ಚಿರತೆಯನ್ನು ನೋಡಿ ವಾಹನ ನಿಲ್ಲಿಸಿದ್ದಾರೆ. ಈ ಭಾಗದ ರೈತರ ತೋಟದ ಅಂಚಿನಲ್ಲೂ ಹಿಂದೆ ಸುಮಾರು ಸಲ‌ ಚಿರತೆ ಕಂಡಿದ್ದು ಸಹಜ ಆತಂಕಕ್ಕೆ ಕೂಡ ಕಾರಣವಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಕಾಡಿಗೆ ಓಡಿಸಿ, ಈ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next