Advertisement

Arrested: ಒಂಟಿ ಮನೆ ಡಕಾಯಿತಿ ಪ್ರಕರಣ: ಬೆಂಗಳೂರಿನ ಐವರು ಆರೋಪಿಗಳ ಸೆರೆ

12:43 PM Jan 12, 2024 | Team Udayavani |

ಚಿಂತಾಮಣಿ: ತೋಟದ ಒಂಟಿ ಮನೆಯಲ್ಲಿ ನ.26ರಂದು ನಡೆದಿದ್ದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಬೆಂಗಳೂರು ಹಾಗೂ ಬೆಂ. ಗ್ರಾಮಾಂತರ ಜಿಲ್ಲೆಯ‌ ಐವರು ಆರೋಪಗಳನ್ನು ಬಂಧಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಗತಿ ಗ್ರಾಪಂ ವ್ಯಾಪ್ತಿಯ ಕೊಂಗತಿಮ್ಮನಹಳ್ಳಿಯ ನಾರಾಯಣಸ್ವಾಮಿ ಎಂಬುವರ ಒಂಟಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಪ್ಯಾಕ್ಟರಿ ಗೇಟ್‌ ಬಳಿಯ ನಿವಾಸಿ ಹರೀಶ್‌, ಬೆಂಗಳೂರಿನ ಟಿ.ದಾಸರಹಳ್ಳಿ ಸಮೀಪದ ಮಲ್ಲಸಂದ್ರ ತಿಪ್ಪೇಸ್ವಾಮಿ, ಶಿವರಾಜ್, ಹೊಸಕೋಟೆ ನಗರದ ಅಂಬೇಡ್ಕರ್‌ ಕಾಲೋನಿಯ ಸೋಮಶೇಖರ್‌, ಅಶೋಕ ಬಂಧಿತ ಆರೋಪಿಗಳು. ಮತ್ತೂಬ್ಬ ಆರೋಪಿ ಭರತ್‌ ತಲೆಮರೆಸಿಕೊಂಡಿದ್ದಾನೆ.

ಚಿನ್ನ, ಜೀಪ್‌, ಬೈಕ್‌ ವಶ: ಆರೋಪಿಗಳಿಂದ ಸುಮಾರು 7 ಗ್ರಾಂ ತೂಕದ 35 ಸಾವಿರ ಬೆಲೆ ಬಾಳುವ ಒಂದು ಜೊತೆ ಬಂಗಾರದ ಕಿವಿ ಓಲೆ, 7.5 ಗ್ರಾಂ ತೂಕದ 40 ಸಾವಿರ ಬೆಲೆ ಬಾಳುವ ಬಂಗಾರದ ಡಾಲರ್‌ ಇರುವ ಕತ್ತಿನ ಚೈನ್‌, ಸುಮಾರು 18 ಸಾವಿರ ರೂ. ಬೆಲೆ ಬಾಳುವ ಒಂದು ಜೊತೆ ಬಂಗಾರದ ಕಿವಿಯ ಗುಂಡುಗಳು, ಡಬಲ್‌ ಬ್ಯಾರೆಲ್‌ ಬಂದೂಕು ಮತ್ತು 8 ಗುಂಡುಗಳು, ಒಂದು ದ್ವಿಚಕ್ರವಾಹನ, ಬೊಲೆರೊ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಲಾಂಗು ಮತ್ತು ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಲವು ಕಡೆ ಕಳ್ಳತನ ಶಂಕೆ:  ಆರೋಪಿಗಳು ಇನ್ನೂ ಹಲವಾರು ಕಡೆ ದರೋಡೆ, ಕಳ್ಳತನ ಮಾಡಿರುವ ಶಂಕೆ ಇದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹರೀಶ್, ತಿಪ್ಪೇಸ್ವಾಮಿ, ಶಿವರಾಜ್‌ ವಿರುದ್ಧ ಮಾಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next