Advertisement

ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿರುವ ಸಿಂದಗಿ ವೈದ್ಯೆ

11:26 AM Oct 20, 2021 | Suhan S |

ವಿಜಯಪುರ: ಉತ್ತರಾಖಂಡ ರಾಜ್ಯದಲ್ಲಿ‌ ಬಾರೀ  ಮಳೆ ಸೃಷ್ಟಿಸಿರುವ ಪ್ರವಾಹದಲ್ಲಿ ವಿಜಯಪುರ ಮೂಲದ ವೈದ್ಯೆಯೊಬ್ಬರು ಸಿಲುಕಿದ್ದು, ಸುರಕ್ಷಿತವಾಗಿರುವ ಮಾಹಿತಿ ಲಭ್ಯವಾಗಿದೆ.

Advertisement

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಡಾ.ಅನಿತಾ ಪಾಪಣ್ಣವರ ಎಂಬ ವೈದ್ಯೆ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದೀಗ ಉತ್ತರಾಖಂಡ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ ಸ್ಥಿತಿ ತಲುಪಿದ್ದು, ಕ್ಯಾಪ್ಟನ್ ಡಾ. ಅನಿತಾ ಕೂಡ ಪ್ರವಾಹದ ಸಿಲುಕಿದ್ದಾರೆ.

ಉತ್ತರಾಖಂಡನ ಹಾಲದವನಿ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದರೂ ಕ್ಯಾಪ್ಟನ್ ಡಾ.ಅನಿತಾ  ಸುರಕ್ಷಿತವಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಬೆಂಗಳೂರಿನ ಸ್ಟೇಟ್  ಡಿಸಾಸ್ಟರ್ ಆಫೀಸ್ ನೀಡಿದ ಮಾಹಿತಿ ಆಧರಿಸಿ ಜಿಲ್ಲಾಡಳಿತ ಮಾಹಿತಿ ನೀಡಿದೆ.

Advertisement

ಕ್ಯಾಪ್ಟನ್ ಅನಿತಾ ಮನೆಯಲ್ಲಿ ಆತಂಕ ವ್ಯಕ್ತವಾಗಿದ್ದು, ಮಗಳು ಸುರಕ್ಷಿತವಾಗಿ ಮರಳಿ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next