Advertisement

ಬೆಳ್ಳಿಗದೆ ಉಡುಗೊರೆ: ಹನುಮದೇವರಿಗೆ ಅರ್ಪಿಸಿದ ಸಿಎಂ

08:48 PM Dec 25, 2021 | Team Udayavani |

ವಿಜಯಪುರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮಗೆ ವಿಜಯಪುರ ಕಾರ್ಯಕ್ರಮದ ಸನ್ಮಾನದಲ್ಲಿ ನೀಡಿದ ಬೆಳ್ಳಿ ಗದೆಯನ್ನು ನಗರದ ಹನುಮದೇವರಿಗೆ ಸಮರ್ಪಿಸುವಂತೆ ಮರಳಿಸಿದ ಘಟನೆ ಶನಿವಾರ ಜರುಗಿತು.

Advertisement

ವಿಜಯಪುರ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಬೆಳ್ಳಿಯ ಗದೆಯನ್ನು ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ತಮ್ಮ ಭಾಷಣ ಮುಗಿಸು ಕೊನೆಯಲ್ಲಿ ತಮಗೆ ಸನ್ಮಾನ ಮಾಡಿದ ವಿಜುಗೌಡ ಅವರನ್ನು ಕರೆದು, ಅವರಿಗೇ ಬೆಳ್ಳಿ ಗದೆಯನ್ನು ಮರಳಿಸಿ, ಗದೆಯನ್ನು ನಗರದ ಹನುಮದೇವರಿಗೆ ಸಮರ್ಪಿಸಿ ಎಂದು ಮನವಿ ಮಾಡಿದರು.

ನಾನು ಯಾವುದೇ ಸಮಾರಂಭದಲ್ಲಿ ಬೆಳ್ಳಿಯ ಗದೆಯನ್ನು ಸ್ವೀಕರಿಸಿದರೂ ಅದನ್ನು ಅಲ್ಲಿನ ಹನುಮ ದೇವರಿಗೆ ಸಮರ್ಪಿಸಲು ಸ್ಥಳೀಯರಿಗೆ ಹಸ್ತಾಂತರಿಸುತ್ತೇನೆ. ಬೆಳ್ಳಿಯ ಕತ್ತಿ, ಖಡ್ಗ ನೀಡಿದರೆ ಗ್ರಾಮ ದೇವತೆ ಗುಡಿಗೆ ಸಮರ್ಪಿಸಲು ಮರಳಿಸುತ್ತೇನೆ ಎಂದು ತಾವು ಗದೆಯನ್ನು ಸ್ವೀಕರಿಸಿ, ಮರಳಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾಜಯಿಸಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next