Advertisement

ಸರ್ಕಾರಿ ನೌಕರರ ಮೌನ ಪ್ರತಿಭಟನೆ

06:37 AM Jul 11, 2020 | Lakshmi GovindaRaj |

ರಾಮನಗರ: ಬಂಗಾರಪೇಟೆ ತಾಲೂಕು ತಹಶೀಲ್ದಾರ್‌ ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ನಗರದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ಕಂದಾಯ ನೌಕರರ ಸಂಘದ ಜಿಲ್ಲಾ ಘಟಕ ಗಳು ಮೌನ ಪ್ರತಿಭಟನೆ  ನಡೆಸಿದವು. ನಗರದ ಸರ್ಕಾರಿ ಕಚೇರಿಗಳ ಸಂಕೀರ್ಣದ (ಡೀಸಿ ಕಚೇರಿ) ಆವರಣದಲ್ಲಿ ಜಮಾಯಿಸಿ ದ ಜಿಲ್ಲಾ ಸಂಘದ ಪದಾಧಿಕಾರಿಗಳು ತಮ್ಮ ಆಕ್ರೋಶ ಹೊರಹಾಕಿದರು.

Advertisement

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿ ಕಾರಿಗಳು ಮೃತ  ತಹಶೀಲ್ದಾರ್‌ ಚಂದ್ರ ಮೌಳೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ತೋಳಿಗೆ ಕಪ್ಪುಬಟ್ಟೆ ಕಟ್ಟಿದ್ದ ನೂರಾರು ಸರ್ಕಾರಿ ನೌಕರರು ಅಗಲಿ ದ ಅಧಿಕಾರಿಗೆ ಶ್ರದಾಂಜಲಿ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ  ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಕೆ.ಬೈರಲಿಂಗಯ್ಯ ಮಾತನಾಡಿದರು.

ಕೋಲಾರ ಜಿಲ್ಲೆಯ ಬಂಗಾರುಪೇಟೆ ತಾಲೂಕು ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ ಅವರು ಬಂಗಾರುಪೇಟೆ ತಾಲೂಕು ಕಾಮಸಮುದ್ರ  ಹೋಬಳಿ, ತೋಪನಹಳ್ಳಿ ಗ್ರಾಮದ ರಾಮಮೂರ್ತಿ ಹಗೂ ವೆಂಕಟಾ ಪತಿ ಎಂಬುವರ ಜಮೀನು ವ್ಯಾಜ್ಯದ ಸಂಬಂಧ ಪೊಲೀಸ್‌ ರಕ್ಷಣೆಯಲ್ಲಿ ಜಂಟಿ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಆರೋಪಿ ವೆಂಕಟಪತಿ, ಪೊಲೀಸರ ಸಮ್ಮುಖದಲ್ಲೇ ಏಕಾಏಕಿ ತಹಶೀಲ್ದಾರರನ್ನು ಚಾಕುವಿ ನಿಂದ ಇರಿದು ಹತ್ಯಗೈದಿದ್ದಾರೆ.

ಈ ಕೃತ್ಯವನ್ನು ರಾಜ್ಯದ ಎಲ್ಲ ಸರ್ಕಾರಿ ನೌಕರರು ತೀವ್ರವಾಗಿ ಖಂಡಿಸಿರುವುದಾಗಿ ತಿಳಿಸಿದರು. ರಾಜ್ಯದಲ್ಲಿ ಕಂದಾಯ, ಭೂ ಮಾಪನ,  ಗ್ರಾಮೀಣಾಭಿವೃದಿಟಛಿ ಮತ್ತು ಪಂಚಾಯತ್‌  ರಾಜ್‌ ಇಲಾಖೆ, ಆರೋಗ್ಯ ಇಲಾಖೆ ಸೇರಿ ದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿ ಗಳು ಕರ್ತವ್ಯ ನಿರ್ವಹಿಸುವ ವೇಳೆ ಇಂತಹ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿದೆ. ಇಂತಹ ಘಟನೆ  ತಡೆಯಲು ರಾಜ್ಯದಲ್ಲಿ ಕಠಿಣ ಕಾನೂನು ಜಾರಿಯಾಗಬೇಕಾಗಿದೆ ಎಂದು ಆಗ್ರಹಿಸಿದರು.

ಕೃತ್ಯ ಎಸಗಿದ ಅಪರಾಧಿಯನ್ನು ತಕ್ಷಣ ಬಂಧಿಸಬೇಕು. ಮೃತರ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ  ನೇಮಕಾತಿ ನೀಡಬೇಕು. ಸರ್ಕಾರಿ ನೌಕರರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲಾ ಸರ್ಕಾರಿ  ನೌಕರರ ಸಂಘದ ಪದಾಧಿ ಕಾರಿಗಳು ನೀಡಿದ ಮನವಿಯನ್ನು ಜಿಲ್ಲಾಧಿ ಕಾರಿ ಎಂ.ಎಸ್‌.ಅರ್ಚನಾ ಸ್ವೀಕರಿಸಿದರು.

Advertisement

ಪ್ರತಿಭಟನೆಯಲ್ಲಿ ಜಿಲ್ಲಾ ಸರ್ಕಾರಿ ನೌರಕರರ ಸಮಘದ ಕಾರ್ಯದರ್ಶಿ ಎಂ. ರಾಜೇಗೌಡ, ಖಜಾಂಚಿ ಟಿ.ನರಸಯ್ಯ, ರಾಜ್ಯ  ಪರಿಷತ್‌ ಸದಸ್ಯ ಕೆ.ಸತೀಶ್‌  ಪದಾಧಿಕಾರಿ ಗಳಾದ ಶಿವಸ್ವಾಮಿ, ರಾಜಶೇಖರ್‌, ಕರ್ನಾಟಕ ಕಂದಾಯ ಇಲಾಖಾ ನೌಕರರ ಸಂಘದ ಜಿಲ್ಲಾ ಸಂಘದ ಅಧ್ಯಕ್ಷ ಎನ್‌.ರಮೇಶ್‌, ಪ್ರಮುಖರಾದ ಹರ್ಷ ಎಂ, ಹೆಚ್‌. ಜಗದೀಶ್‌, ಎ.ಎಸ್‌. ಧರೇಶ್‌ಗೌಡ, ಮೋಹನ್‌ ಎಂ.ಎನ್‌.,  ಚಂದ್ರೇಗೌಡ ಸಿ. ಎಸ್‌.ತಂಗರಾಜು, ವೆಂಕಟೇಶ್‌ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next