Advertisement

ಮೌನ ಮುರಿದ ರಶ್ಮಿಕಾ 

11:54 AM Sep 19, 2018 | Team Udayavani |

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಗೆ ಗ್ರಾಸವಾದ ನಟಿ ಯಾರೆಂದರೆ ಎಲ್ಲರು ರಶ್ಮಿಕಾ ಮಂದಣ್ಣರತ್ತ ಬೆರಳು ತೋರಿಸುತ್ತಾರೆ. ರಕ್ಷಿತ್‌ ಶೆಟ್ಟಿ ಜೊತೆಗಿನ ಬ್ರೇಕಪ್‌ ಸುದ್ದಿ ಹೊರಬಂದ ನಂತರವಂತೂ ರಶ್ಮಿಕಾ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಹೆಚ್ಚೇ ಸುದ್ದಿಯಾದರು ಎಂದರೆ ತಪ್ಪಲ್ಲ. ಅದರಲ್ಲೂ ರಶ್ಮಿಕಾ ಕನ್ನಡದ “ವ್ರತ್ರ’ ಚಿತ್ರದಿಂದ ಹೊರಬಂದ ನಂತರವಂತೂ ಟ್ರೋಲ್‌ ಮಾಡುವವರ ಸಂಖ್ಯೆ ಹಾಗೂ ಟ್ರೋಲ್‌ ರೀತಿ ಬದಲಾಗಿದ್ದು ಸುಳ್ಳಲ್ಲ.

Advertisement

ಇಷ್ಟು ದಿನ ಎಲ್ಲವನ್ನು ದೂರದಿಂದಲೇ ಗಮನಿಸಿಕೊಂಡಿದ್ದ ರಶ್ಮಿಕಾ ಮೊದಲ ಬಾರಿಗೆ ಟ್ವೀಟರ್‌ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ನಾನಾ ಕಥೆಗಳಿಂದ, ಟ್ರೋಲ್‌ಗ‌ಳಿಂದ ತಮಗಾಗಿರುವ ಬೇಸರದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಈ ಹಿಂದೆ ರಕ್ಷಿತ್‌ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಈಗ ರಶ್ಮಿಕಾ ಸರದಿ. ಅಷ್ಟಕ್ಕೂ ರಶ್ಮಿಕಾ ಅವರು ಏನು ಹೇಳಿದ್ದಾರೆಂಬುದನ್ನು ಅವರ ಮಾತಲ್ಲೇ ಓದಿ;

“ತುಂಬಾ ದಿನಗಳಿಂದ ನಾನು ಮೌನವಾಗಿದ್ದೆ. ಆದರೆ, ನನ್ನ ಬಗ್ಗೆ ಬರುತ್ತಿದ್ದ ಕಥೆ, ಲೇಖನ ಹಾಗೂ ಟ್ರೋಲ್‌ಗ‌ಳನ್ನೆಲ್ಲಾ ಗಮನಿಸುತ್ತಿದ್ದೆ. ನನ್ನನ್ನು ಚಿತ್ರಿಸಿದ ರೀತಿಯಿಂದ ನಾನು  ತುಂಬಾನೇ ಡಿಸ್ಟರ್ಬ್ ಆಗಿದ್ದೇನೆ. ಹಾಗಂತ ನಾನಿಲ್ಲಿ ಯಾರನ್ನೂ ದೂಷಿಸುವುದಿಲ್ಲ. ಏಕೆಂದರೆ ನೀವೆಲ್ಲಾ ಇದನ್ನೇ ನಂಬಿದ್ದೀರಿ. ಆ ಬಗ್ಗೆ ನಾನು ಸ್ಪಷ್ಟನೆ ಕೊಡಲು ನಾನಿಲ್ಲಿ ಬಂದಿಲ್ಲ.

ಆದರೆ ಒಂದು ಮಾತು ಹೇಳಲಿಚ್ಛಿಸುತ್ತೇನೆ, ರಕ್ಷಿತ್‌ಗಾಗಲೀ, ನನಗಾಗಲೀ ಅಥವಾ ಚಿತ್ರರಂಗದ ಇನ್ಯಾರಿಗಾಗಲೀ ಈ ತರಹದ ಪರಿಸ್ಥಿತಿ ಬರಬಾರದು. ನಾಣ್ಯಕ್ಕೆ ಹೇಗೆ ಎರಡು ಮುಖವಿರುತ್ತೋ ಅದೇ ರೀತಿ ಪ್ರತಿ ಕಥೆಗಳಿಗೂ … ಕೊನೆಗೊಂದು ಮಾತು ಹೇಳುತ್ತೇನೆ, ನಾನು ಮುಂದೆಯೂ ಕನ್ನಡ ಸಿನಿಮಾ ಮಾಡುತ್ತೇನೆ … ನಾನಿಲ್ಲಿ ನೆಲೆ ನಿಲ್ಲಲು ಬಂದಿರೋಳು…. ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next