Advertisement

ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ; ಪೊಲೀಸರಿಂದ ಶೋಧ ಕಾರ್ಯ

12:39 PM Oct 02, 2022 | Team Udayavani |

ಪಂಜಾಬ್ : ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಹತ್ಯೆ ಪ್ರಕರಣದ ಆರೋಪಿ ದೀಪಕ್ ಅಲಿಯಾಸ್ ಟಿನು ಶನಿವಾರ ಮಧ್ಯರಾತ್ರಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

Advertisement

ಕೇಂದ್ರೀಯ ತನಿಖಾ ಸಂಸ್ಥೆಯ (ಸಿಐಎ) ಸಿಬ್ಬಂದಿಯೊಬ್ಬರು ರಾತ್ರಿ 11 ಗಂಟೆ ಸುಮಾರಿಗೆ ತಮ್ಮ ಖಾಸಗಿ ವಾಹನದಲ್ಲಿ ಕಪುರ್ತಲಾ ಜೈಲಿನಿಂದ ಮಾನಸಾಗೆ ಕರೆದೊಯ್ಯುತ್ತಿದ್ದಾಗ ದೀಪಕ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

ದೀಪಕ್ ಸಿದ್ದು ಮೂಸೆ ವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಾಯಕನಾಗಿದ್ದ ಎನ್ನಲಾಗಿದೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ ಮತ್ತು ರಾಜಕಾರಣಿ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಈ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದರು. ವಾರಂಟ್ ಮೇಲೆ ದೆಹಲಿ ಪೊಲೀಸರು ದೀಪಕ್ ನನ್ನು ಪಂಜಾಬ್ ಗೆ ಕರೆತಂದಿದ್ದರು ಶನಿವಾರ ತಡ ರಾತ್ರಿ ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದಾನೆ.

Advertisement

ದೀಪಕ್ ಈ ರೀತಿ ಜೈಲಿನಿಂದ ಪರಾರಿಯಾಗುವುದು ಇದು ಹೊಸತಲ್ಲ ಹಲವು ಬಾರಿ ಪೊಲೀಸರ ಕಣ್ಣುತಪ್ಪಿಸಿ ಜೈಲಿನಿಂದ ಪರಾರಿಯಾಗಿದ್ದ ನಿದರ್ಶನಗಳು ಇವೆ ಎನ್ನಲಾಗಿದೆ.
ಇದೀಗ ಪೊಲೀಸರು ದೀಪಕ್ ಪತ್ತೆಗೆ ಬಲೆ ಬಿಸಿದ್ದಾರೆ.

ಇದನ್ನೂ ಓದಿ :ದಕ್ಷಿಣಕನ್ನಡ ಜಿಲ್ಲೆ : ಬಂಧಿತ ಎಲ್ಲ 14 ಪಿಎಫ್ಐ ಮುಖಂಡರಿಗೆ ಜಾಮೀನು ಮಂಜೂರು

Advertisement

Udayavani is now on Telegram. Click here to join our channel and stay updated with the latest news.

Next