Advertisement

“ಸಿದ್ದು ಇನ್ನು ಯಾವತ್ತೂ ಅಧಿಕಾರಕ್ಕೆ ಬರಲ್ಲ’

11:02 PM Jan 12, 2020 | Lakshmi GovindaRaj |

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯ ಜೀವನದಲ್ಲಿ ಬೀದಿಗಿಳಿದು ಹೋರಾಟ ಮಾಡುವುದೇ ಒಂದು ಕೆಲಸ. ಇನ್ನು ಅಧಿಕಾರಕ್ಕೆ ಬರುವು ದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕಾಲ ದಲ್ಲಿ ಸರ್ಕಾರದ ಖಜಾನೆ ತುಂಬಿತ್ತು. ಬಿಜೆಪಿ ಖಾಲಿ ಮಾಡಿದೆ. ಬೀದಿಗಿಳಿದು ಹೋರಾಟ ಮಾಡುತ್ತೇನೆ ಎನ್ನುತ್ತಿ ದ್ದಾರೆ ಸಿದ್ದರಾಮಯ್ಯ. ಪಾಪ ಅವರು ಖಜಾನೆ ತುಂಬಿಟ್ಟು ಹೋಗಿದ್ದರು. ನಾವು ಖಾಲಿ ಮಾಡಿದ್ದೇವೆ. ಸಿದ್ದರಾಮಯ್ಯ ಅವರಿಗೆ ಭವಿಷ್ಯದಲ್ಲಿ ಬೀದಿಗಿಳಿದು ಹೋರಾಟ ಮಾಡುವುದೊಂದೇ ಕೆಲಸ.

ಮರಳಿ ಖುರ್ಚಿ ಮೇಲೆ ಕೂಡಲು ಸಾಧ್ಯವಿಲ್ಲ ಎಂದರು. ಮಂಗಳೂರು ಘಟನೆಗೆ ಸಂಬಂಧಿಸಿ ದಂತೆ ಎಲ್ಲ ಸಿಡಿ ಬಿಡುಗಡೆ ಮಾಡಿದರೆ ಸರ್ಕಾರ ಬೆತ್ತಲಾಗು ತ್ತದೆ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ, ಮೊದಲು ಸಿಡಿ ಬಿಡುಗಡೆ ಮಾಡಲಿ. ಯಾರು ಬೆತ್ತಲಾಗುತ್ತಾರೆ, ಯಾರು ಬಟ್ಟೆ ಹಾಕಿದ್ದಾರೆ ಎಂಬುದು ತಿಳಿಯುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next