Advertisement

ಡೊಂಬಿವಲಿ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದ ಭವನಗಳ ಲೋಕಾರ್ಪಣೆ

04:30 PM Jun 11, 2019 | Team Udayavani |

ಮುಂಬಯಿ: ಪ್ರಪಂಚದ ಜೀವ ಸಂಕುಲಗಳಲ್ಲಿ ಬುದ್ಧಿವಂತ ಪ್ರಾಣಿ ಎನಿಸಿದ ಮಾನವನು ಸಂಘಜೀವಿ. ಕಷ್ಟಮಯ ಜೀವನ ಸಾಗಿಸುತ್ತಿದ್ದ ನಮ್ಮ ಹಿರಿಯರು, ಮುಂಬಯಿ ಪ್ರಾಂತಕ್ಕೆ ಆಗಮಿಸಿ ಕರ್ಮಭೂಮಿಯನ್ನಾಗಿಸಿ ಅಂದಿನ ಸಂಘರ್ಷಮಯ ವಾತಾವರಣದಲ್ಲೂ ಕುಲಗುರು, ಗುರುಪೀಠ, ಕುಲದೇವರ ಸ್ಮರಣೆಯಂತಹ ಶುದ್ಧ ಭಾವನೆಗಳನ್ನು ಬೆಳೆಸಿಕೊಂಡರು. 2018ರ ಅಕ್ಷಯ ತೃತೀಯದಂದು ಮಹಾಗಣಪತಿ ದೇವಸ್ಥಾನಕ್ಕೆ ಬಂದಿ¨ªೆವು. ಕಿಂಚಿತ್‌ ಸಮಯಾವಕಾಶದಲ್ಲಿ ನಿರ್ಮಾಣಗೊಂಡ ಈ ಸೇವಾ ಭವನಗಳು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿ ಸಮಾಜಮುಖೀ ಕಾರ್ಯ, ಸಾಂಘಿಕ ಚಟುವಟಿಕೆಗಳಿಂದ ಯಶಸ್ಸು ಗಳಿಸಲಿ ಎಂದು ಕವಳೆ ಮಠಾಧೀಶ ಶ್ರೀ ಶಿವಾನಂದ ಸರಸ್ವತೀ ಮಹಾರಾಜ್‌ ಸ್ವಾಮೀಜಿಯವರು ನುಡಿದರು.

Advertisement

ಮೇ 31ರಂದು ಡೊಂಬಿವಲಿ ಪೂರ್ವದ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದಲ್ಲಿ ಎರಡು ನೂತನ ಮಹಡಿಗಳಾದ ಗುರುಕೃಪಾ ಮತ್ತು ನಾರಾಯಣ ಕೃಪಾ ಸೇವಾಭವನಗಳನ್ನು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕವಳೆ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತೀ ಮಹಾರಾಜ್‌ ಇವರು ತಮ್ಮ ದಿವ್ಯಹಸ್ತದಿಂದ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಶುಭ ಹಾರೈಸಿ, ಮುಂಬಯಿಯಲ್ಲಿನ ಒತ್ತಡ, ಸಂಘರ್ಷಮಯ ಬದುಕಿನಲ್ಲಿಯೂ ಹುಟ್ಟೂರಿನ ಸೆಳೆತ, ಅಲ್ಲಿನ ದೇವಸ್ಥಾನಗಳ ಬಗ್ಗೆ ಪ್ರೀತಿ, ಕಾಳಜಿಯಯನ್ನು ಗಮನಿಸಿದ್ದೇವೆ. ಈಶ್ವರನ ಅಸ್ತಿತ್ವವನ್ನು ಸ್ವೀಕರಿಸಿದ ಜೀವನ ನೈತಿಕತೆಯಿಂದ ಕೂಡಿ ಉನ್ನತಿಯತ್ತ ಸಾಗುತ್ತದೆ. ಇಂದು ದೀಕ್ಷೆಯ 25ರ ಸಂಭ್ರಮವನ್ನು ಆಚರಿಸಿದ ಈ ಕ್ಷಣವು ನಮ್ಮ ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳಿಗೆ ಸಂದ ವಿಶೇಷ ಗೌರವವಾಗಿದೆ ಎಂದರು.

ಪ್ರಾತಃಕಾಲ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಜಯ ಘೋಷಗಳ ಮೂಲಕ ಸ್ವಾಗತಿಸಲಾಯಿತು. ಮಕ್ಕಳು, ಮಹಿಳೆಯರೂ ಸೇರಿದಂತೆ ಶಿಷ್ಯವರ್ಗದವರು ಪಾರಂಪರಿಕ ತೊಡುಗೆಯಲ್ಲಿ ಭಾಗವಹಿಸಿದ್ದರು. ಗುರುವರ್ಯರ ಸನ್ಯಾಸ ದೀಕ್ಷೆಯ ರಜತವರ್ಷ ಆಚರಣೆಯ ಸಂದರ್ಭದಲ್ಲಿ ಸೇವಾಮಂಡಲದ ವತಿಯಿಂದ ಪಾದಪೂಜೆ ಹಾಗೂ ಸಮಸ್ತ ಶಿಷ್ಯವರ್ಗದ ಪರವಾಗಿ ಗೌರವಾರ್ಪಣೆ-ಗುರುವಂದನಾ ಕಾರ್ಯಕ್ರಮ ಜರಗಿತು. ಮಂಡಲದ ಅಧ್ಯಕ್ಷ ಲಕ್ಷ್ಮಣ್‌ ವಿನಾಯಕ್‌ ಅವರು ನೆನಪಿನ ಕಾಣಿಕೆಗಳನ್ನು ಶ್ರೀಗಳಿಗೆ ಅರ್ಪಿಸಿದರು.

ಅಪರಾಹ್ನ ಎಲ್‌. ವಿ. ನಾಯಕ್‌ ಅಧ್ಯಕ್ಷತೆಯಲ್ಲಿ ಜರಗಿದ ಧರ್ಮಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಜತೆ ಆಯುಕ್ತ ಎಂ. ಗೋಕುಲ್‌ದಾಸ್‌ ನಾಯಕ್‌ ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ದೇಶದಾದ್ಯಂತ ಇರುವ ರಾಜಾಪುರ ಸಾರಸ್ವತ ಸಮಾಜದ ಪ್ರತಿನಿಧಿಗಳು ಉಪಸಿuತರಿದ್ದರು.

ಕಳೆದ 33 ವರ್ಷಗಳಿಂದ ಸಂಸ್ಥೆಯ ಅಧ್ಯಕ್ಷರಾಗಿರುವ ಲಕ್ಷ್ಮಣ್‌ ವಿ. ನಾಯಕ್‌ ಅವರು ಮಾತನಾಡಿ, ಕಮಿಟಿಯು ನಿಮಿತ್ತ ಮಾತ್ರ. ಈ ನೂತನ ಭವನಗಳ ನಿರ್ಮಾಣವು ಮಹಾರಾಷ್ಟ್ರದಾದ್ಯಂತ ಇರುವ ಸಹೃದಯಿ ದಾನಿಗಳಿಂದ ಸಾಧ್ಯ ಎನಿಸಿದೆ. ಜನರಿಂದ ಜನರಿಗೋಸ್ಕರ ನಿರ್ಮಿತವಾದ ಈ ಭವನಗಳಲ್ಲಿ ಧರ್ಮ, ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸೇವಾಕಾರ್ಯಗಳು ನಿರಂತರ ಜರಗಬೇಕೆಂಬ ಉದ್ದೇಶ ನಮ್ಮದು ಎಂದರು.

Advertisement

ಕಾರ್ಯದರ್ಶಿ ರವೀಂದ್ರನಾಥ್‌ ಜಿ. ನಾಯಕ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 1986ರಲ್ಲಿ ಲಕ್ಷ್ಮೀàನಾರಾಯಣ ಭಟ್‌ರಿಂದ ಬೀಜಾಂಕುರಗೊಂಡ ಸೇವಾಮಂಡಲದ ಕನಸು ಸಾಕಾರಗೊಂಡು 2001ರಲ್ಲಿ ವರದ ಸಿದ್ಧಿ ಸೇವಾ ಭವನ, 2011 ರಲ್ಲಿ ಮಹಾಗಣಪತಿ ಮಂದಿರ ಮತ್ತು ಇಂದು ಎರಡು ನೂತನ ಭವನಗಳು ಲೋಕ ಕಲ್ಯಾಣದ ಉದ್ದೇಶದಿಂದ ನಿರ್ಮಿತಗೊಂಡು ಲೋಕಾರ್ಪಣೆಗೊಂಡಿವೆ. ಸಂಸ್ಥಾನ ಗೌಡಪಾದಾಚಾರ್ಯ ಮೂಲ ಪರಂಪರೆಯಿಂದ ಬೆಳಗಿ ಬಂದ ಸಾರಸ್ವತರ ಕೇಂದ್ರೀಯ ಮಠ ಕವಳೆ ಮಠಾಧೀಶರ ಆಶೀರ್ವಾದದಿಂದ ಈ ಸತ್ಕಾರ್ಯಗಳು ಜರಗುತ್ತಿವೆ ಎಂದರು.

ನೂತನ ವಾಸ್ತು ನಿರ್ಮಾಣ ಸಾಗಿಬಂದ ಬಗ್ಗೆ ಉಪಾಧ್ಯಕ್ಷ ಮಾಧವ್‌ ಪಿ. ನಾಯಕ್‌ ಹಾಗೂ ಖರ್ಚು ವಿವರಗಳ ಮಾಹಿತಿಯನ್ನು ಕೋಶಾಧಿಕಾರಿ ಋ‌ಂಜಯ್‌ ಬಿಪಾಟ್ಕರ್‌ ಅವರು ವಿವರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕ ವಿಠಲ ನಾಯಕ್‌ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರಗಿತು. ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರ-ವರದಿ: ರವಿಶಂಕರ್‌ ಡಹಾಣೂರೋಡ್‌

Advertisement

Udayavani is now on Telegram. Click here to join our channel and stay updated with the latest news.

Next