Advertisement

ಪದ್ಮಶ್ರೀ ಗೌರವ ಬೇಡ ಎಂದ ಸಿದ್ದೇಶ್ವರ ಶ್ರೀಗಳು

06:35 AM Jan 27, 2018 | |

ಕಲಬುರಗಿ: ಕೇಂದ್ರ ಸರ್ಕಾರ ಪ್ರಕಟಿಸಿದ “ಪದ್ಮಶ್ರೀ’ ಗೌರವವನ್ನು ಆಧ್ಯಾತ್ಮಿಕ ಗುರು, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ತಿರಸ್ಕರಿಸಿದ್ದಾರೆ. ” ಈ ಗೌರವ ಬೇಡ’ ಎಂದು ಪ್ರಧಾನಿ ಮೋದಿ ಅವರಿಗೆ ಶನಿವಾರ ಪತ್ರ ಬರೆಯುವುದಾಗಿ ಶ್ರೀಗಳು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

Advertisement

ಆಧ್ಯಾತ್ಮಿಕ ಪ್ರವಚನ ನೀಡಲು ನಗರದಲ್ಲಿ ತಂಗಿರುವ ಶ್ರೀಗಳು, ಸನ್ಯಾಸಿಯಾದ ತಮಗೆ ಪ್ರಶಸ್ತಿ-ಗೌರವ ಏಕೆ ಬೇಕು? ತಮಗೆ ಅದರ ಅವಶ್ಯಕತೆಯಿಲ್ಲ. ಯಾವತ್ತೂ ಪ್ರಶಸ್ತಿ-ಗೌರವ ಸ್ವೀಕರಿಸಿಲ್ಲ.

ಈ ಹಿಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ನೀಡಿದ್ದ ಗೌರವ ಡಾಕ್ಟರೆಟ್‌ ಪದವಿಯನ್ನೂ ಸ್ವೀಕರಿಸಿರಲಿಲ್ಲ ಎಂದರು. ಕೇಂದ್ರ ಸರ್ಕಾರ ಪದ್ಮಶ್ರೀ ಗೌರವ ನೀಡಿದೆಯಾದರೂ ತಾವು ಅದನ್ನು ಅಪೇಕ್ಷಿಸಿಲ್ಲ. ಈ ವಿಷಯ ಕುರಿತು ಚರ್ಚೆ ಬೇಡ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next