Advertisement

ಸಿದ್ದಾರ್ಥ್ ನಾಪತ್ತೆ ಪ್ರಕರಣ : ಶೋಧ ಕಾರ್ಯ ಪುನರಾರಂಭ

07:21 AM Jul 31, 2019 | Team Udayavani |

ಮಂಗಳೂರು: ಸೋಮವಾರದಿಂದ ಸಾಯಂಕಾಲದ ಬಳಿಕ ಉಳ್ಳಾಲದ ನೇತ್ರಾವತಿ ನದಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಉದ್ಯಮಿ ಸಿದ್ದಾರ್ಥ್ ಅವರಿಗಾಗಿ ಮಂಗಳವಾರ ಬೆಳಿಗ್ಗೆಯಿಂದ ನೇತ್ರಾವತಿ ನದಿಯಲ್ಲಿ ನಡೆಸಲಾಗುತ್ತಿರುವ ಶೋಧಕಾರ್ಯವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.

Advertisement

ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು, ಮುಳುಗು ತಜ್ಞರು ಮತ್ತು ಸ್ಥಳೀಯ ಮೀನುಗಾರರು ಹಾಗೂ ಕಾರವಾರದಿಂದ ಆಗಮಿಸಿದ ಹೆಲಿಕಾಫ್ಟರ್ ಸೇರಿದಂತೆ ಅತ್ಯಾಧುನಿಕ ಮಾದರಿಯಲ್ಲಿ ಮಂಗಳವಾರ ಪೂರ್ತಿ ಘಟನೆ ನಡೆದಿದೆ ಎನ್ನಲಾಗುತ್ತಿರುವ ಸೇತುವೆ ಇರುವ ನೇತ್ರಾವತಿ ನದಿ ಭಾಗದಲ್ಲಿ ವ್ಯಾಪಕ ಶೋಧಕಾರ್ಯವನ್ನು ಕೈಗೊಂಡರೂ ಫಲಿತಾಂಶ ಶೂನ್ಯವಾಗಿತ್ತು. ಹಾಗಾಗಿ ಮಂಗಳವಾರ ರಾತ್ರಿ ನದಿಯಲ್ಲಿ ಶೋಧ ಕಾರ್ಯವನ್ನು ನಿಲ್ಲಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ನದಿ ಮತ್ತು ಸಮುದ್ರ ಬದಿಯಲ್ಲಿ ಕೆಲ ಹೊತ್ತು ಶೋಧ ಕಾರ್ಯ ನಡೆಸಲಾಗುವುದು ಹಾಗೂ ಬುಧವಾರ ಬೆಳಿಗ್ಗಿನಿಂದ ಶೋಧಕಾರ್ಯವನ್ನು ಪುನರಾರಂಭಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next