Advertisement

ಕಾಂಗ್ರೆಸ್ ಬಿಜೆಪಿ ಎರಡೂ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯಾಗಲಿ: ಸಿದ್ಧರಾಮಯ್ಯ

01:32 PM Feb 15, 2023 | Team Udayavani |

ಚಿತ್ರದುರ್ಗ:  ದುಡ್ಡು ತೆಗೆದುಕೊಳ್ಳುವುದು ಫೋಟೋ ತೆಗೆದು ತೋರಿಸಬೇಕಾ. ಮಾಜಿ ಸಿಎಂ ಬಿಎಸ್ ವೈಗೆ ವಯಸ್ಸಿನ ಅರಳು ಮರಳಾಗಿದೆ ಎಂದು ಸಿಎಂ ಬೊಮ್ಮಾಯಿ ಹಾಗೂ ಬಿಎಸ್‌ ವೈ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್‌ ಕೊಟ್ಟರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಲೆ ತಿರುಕರು ಎಂದ ಬಿಎಸ್ ವೈ ಹಾಗೂ ದಾಖಲೆ ಕೊಡಲಿ ಎಂದ ಸಿಎಂ ಬೊಮ್ಮಾಯಿ ಅವರ ಹೇಳಿಕೆಗೆ  ಟಾಂಗ್‌ ಕೊಟ್ಟರು.

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದಾರೆ. ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ತರಾತುರಿ ಟೆಂಡರ್ ಕರೆದು ಭ್ರಷ್ಟಾಚಾರವಾಗಿದೆ ಎಂದು ಪತ್ರ ಬರೆದಿದ್ದಾರೆ. ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆ‌ ನಡೆಸಲಿ. ನಮ್ಮ ಆಡಳಿತ ಅವಧಿಯಲ್ಲಿ ಕಡ್ಲೆಪುರಿ‌ ತಿನ್ನುತ್ತಿದ್ದರಾ? ಶಾರ್ಟ್ ಟೈಮ್‌ ಟೆಂಡರ್ ನ ಉದ್ದೇಶ ಏನು? ಪೆಂಡಿಂಗ್ ಬಿಲ್ಸ್ ಗಳನ್ನು ಹಣ  ನೀಡಿದವರಿಗೆ ಕೊಡುತ್ತಿದ್ದಾರೆ. 20ಸಾವಿರ ಕೋಟಿ ಪೆಂಡಿಂಗ್ ಬಿಲ್ಸ್ ಇದೆ, ಹಣ ಕೊಟ್ಟವರಿಗೆ ಬಿಲ್ಸ್ ಕೊಡುತ್ತಿದ್ದಾರೆ ನೂರು ರೂ. ಇರುವ ಟೆಂಡರ್ ಇನ್ನೂರು ರೂ. ಮಾಡಿದ್ದಾರೆ. ಆ ಮೂಲಕ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಲ್ಲಾ ಟೆಂಡರ್‌ ರದ್ದುಗೊಳಿಸಬೇಕು ಎಂದರು.

ಇದನ್ನೂ ಓದಿ: ಮಹದಾಯಿ, ಕಳಸಾ-ಬಂಡೂರಿ ಕಾಮಗಾರಿ ಆರಂಭಿಸದೆ ಬಿಜೆಪಿ ರೈತರಿಗೆ ಮೋಸ ಮಾಡಿದೆ: ಎಚ್.ಕೆ.ಪಾಟೀಲ

ಬೊಮ್ಮಾಯಿ‌ ಕಾಲದಲ್ಲೇ ಇದು ಶುರುವಾಗಿದ್ದು, ಹಿಂದೆ ಹೀಗಾಗಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ತನಿಖೆ ಮಾಡಿಸುತ್ತೇವೆ. ಲೂಟಿ ಹೊಡೆದವರನ್ನು ಜೈಲಿಗೆ ಕಳಿಸುತ್ತೇವೆ ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ವಿಪಕ್ಷದಲ್ಲಿದ್ದವರು ಏನು ಮಾಡುತ್ತಿದ್ದರು. ಮಾಧ್ಯಮದಲ್ಲಿದ್ದ‌ ನಿವೇನು ಮಾಡುತ್ತಿದ್ದಿರಿ ಎಂದು ಪ್ರಶ್ನೆ ಮಾಡಿದರು.

Advertisement

ಬಿಜೆಪಿ ಸರ್ಕಾರ ಬಂದು ಮೂರುವರೆ ವರ್ಷವಾಯಿತು. ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆ ಮಾಡಿಸಬೇಕಿತ್ತು ಕಾಂಗ್ರೆಸ್, ಬಿಜೆಪಿ ಎರಡೂ ಆಡಳಿತಾವಧಿಯ ತನಿಖೆ ಆಗಲಿ ಧಮ್‌ ಇದ್ದರೆ ತನಿಖೆ ಮಾಡಿಸಲಿ ಎಂದು ಸಿದ್ಧರಾಮಯ್ಯ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next