Advertisement

ಸರ್ಕಾರ ಬೀಳಿಸುವ ಉದ್ದೇಶ ಸಿದ್ದರಾಮಯ್ಯ ಮನಸ್ಸಿನಲ್ಲಿದೆ;ಸಚಿವ ಡಿವಿಎಸ್

03:05 PM Aug 28, 2018 | |

ಮಂಗಳೂರು: ‘ಮೇಲಿನ ಒತ್ತಡಕ್ಕೆ ಮಣಿದು, ಕೆಲವೇ ದಿನಗಳಲ್ಲಿ  ಮೈತ್ರಿ ಸರ್ಕಾರ ಬೀಳಿಸುತ್ತೇನೆ ಎಂದು ಮನಸ್ಸಿನಲ್ಲಿ  ಆಲೋಚನೆ ಮಾಡಿಕೊಂಡೆ ಸಿದ್ದರಾಮಯ್ಯ ಜೆಡಿಎಸ್‌ಗೆ ಬೆಂಬಲ ನೀಡಲು ಒಪ್ಪಿಕೊಂಡಿದ್ದರು’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಹೇಳಿಕೆ ನೀಡಿದ್ದಾರೆ.

Advertisement

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮೈತ್ರಿ ಸರ್ಕಾರ ಯಾವುದೇ ಒಳ್ಳೆಯ ಉದ್ದೇಶದಿಂದ ಅಸ್ಥಿತ್ವಕ್ಕೆ ಬಂದಿಲ್ಲ. ಬಿಜೆಪಿಯವರನ್ನು ದೂರ ಇಡುವುದೊಂದೆ ಅವರ ಉದ್ದೇಶವಾಗಿತ್ತು. ಪ್ರಜಾತಂತ್ರ ಎತ್ತಿ ಹಿಡಿಯಲು ಅವರು ಅಧಿಕಾರಕ್ಕೆ ಬರಲಿಲ್ಲ. ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಸ್ವಾರ್ಥ ರಾಜಕಾರಣಿಗಳಿಗೆ ರಾಜ್ಯದ  ಹಿತಾಸಕ್ತಿ ಬೇಡ’ ಎಂದರು. 

‘ದೇವೇಗೌಡರು, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಯಾವದೇ ಕಾರಣಕ್ಕೂ ಒಟ್ಟಾಗಲಿಕ್ಕೆ ಸಾಧ್ಯವೇ ಇಲ್ಲ . ಮುಂದಿನ 15 ದಿನ ಇಲ್ಲ ತಿಂಗಳೊಳಗೆ ಸರ್ಕಾರ ಪತನವಾಗಲಿದೆ’ ಎಂದು ಸಚಿವ ಡಿವಿಎಸ್‌ ಭವಿಷ್ಯ ನುಡಿದರು. 

Advertisement

Udayavani is now on Telegram. Click here to join our channel and stay updated with the latest news.

Next