Advertisement

ಸಿದ್ದಾಪುರ: ಕಾಲೇಜು ವಿದ್ಯಾರ್ಥಿನಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ,ಬೆದರಿಕೆ

11:19 AM Dec 18, 2021 | Team Udayavani |

ಸಿದ್ದಾಪುರ: ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರೊಬ್ಬರ ವಿರುದ್ಧ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಅತಿಥಿ ಇತಿಹಾಸ ಪ್ರಾಧ್ಯಾಪಕ ವಿಘ್ನೇಶ್‌ ವಿರುದ್ಧ ಶಂಕರನಾರಾಯಣ ರಾಣೆಗೆ ದೂರು ನೀಡಲಾಗಿದ್ದು. ಕಳೆದ ವರ್ಷ ಆನ್‌ಲೈನ್‌ ಕ್ಲಾಸ್‌ ನಡೆಯುವಾಗ ವಿಘ್ನೇಶ್‌ ತನ್ನ ಮೊಬೈಲ್‌ಗೆ ಪಠ್ಯಕ್ಕೆ ಸಂಬಂಧಿಸಿ ಮೆಸೇಜ್‌ ಕಳುಹಿಸುತ್ತಿದ್ದರು. ಅನಂತರ ವ್ಯಾಟ್ಸ್‌ ಆ್ಯಪ್‌ಗೆ ಅಸಭ್ಯ ಮೆಸೇಜ್‌ ಕಳುಹಿಸುತ್ತಿದ್ದರು. ಇದರ ವಿರುದ್ಧ ಎಚ್ಚರಿಕೆ ನೀಡಿದ ಬಳಿಕ ನಿಲ್ಲಿಸಿದ್ದರು. ಆದರೆ ಇದೀಗ ಕಾಲೇಜಿನಲ್ಲಿರುವಾಗ ಹಿಂಬಾಲಿಸಿಕೊಂಡು ಬಂದು ಮದುವೆಯಾಗು, ಪ್ರೀತಿ ಮಾಡು ಎಂದು ಒತ್ತಾಯಿಸಿ ಮಾನಸಿಕ, ಲೈಂಗಿಕ ಹಿಂಸೆ ನೀಡುತ್ತಿದ್ದಾರೆ. ಮಾತ್ರವಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next