Advertisement

ಸಿದ್ದಕಟ್ಟೆ: ಆಸ್ಪತ್ರೆಗೆ ತೆರಳಿದ ಹೋಟೆಲ್ ಮಾಲಕ ನಾಪತ್ತೆ

11:07 PM Aug 04, 2023 | Team Udayavani |

ಪುಂಜಾಲಕಟ್ಟೆ: ಕೈನೋವು ಎಂದು ವೈದ್ಯರ ಬಳಿ ತೆರಳಿದ ಹೊಟೇಲ್‌ ಮಾಲಕ ನಾಪತ್ತೆಯಾದ ಕುರಿತು ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆಯ ಸಂದೀಪ್‌ ಜೈನ್‌ ನಾಪತ್ತೆಯಾದವರು. ಅವರು ಕಾರ್ಕಳ ತಾಲೂಕಿನ ಈದು ಗ್ರಾಮದ ನೂರಲ್‌ ಬೆಟ್ಟು ಎಂಬಲ್ಲಿ ವಾಸ್ತವ್ಯವಿದ್ದು, ಪ್ರಸ್ತುತ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆ ಪೇಟೆಯಲ್ಲಿರುವ ಜೈನ್‌ ರೆಸ್ಟೋರೆಂಟ್‌ ಎಂಬ ಹೆಸರಿನ ಹೊಟೇಲ್‌ ಅನ್ನು ನಡೆಸಿಕೊಂಡಿದ್ದರು. ಜು. 31ರಂದು ಕೈನೋವು ಎಂದು ವೈದ್ಯರ ಬಳಿ ಹೋಗಿ ಬರುತ್ತೇನೆ ಎಂದು ಹೊಟೇಲ್‌ನಿಂದ ಆಕ್ಟಿವಾ ಸ್ಕೂಟರ್‌ನಲ್ಲಿ ತೆರಳಿದ್ದ ಅವರು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಸಂದೀಪ್‌ ಅವರ ಪತ್ನಿ ಅಕ್ಷತಾ ಅವರು ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next